Advertisement

ಹುಟ್ಟೂರನ್ನೇ ಆದರ್ಶ ಗ್ರಾಮವಾಗಿ ಪಡೆದ ಎಂಎಲ್‌ಸಿ

11:21 PM Aug 27, 2019 | Lakshmi GovindaRaj |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಟ್ಟೂರಾದ ಹುಚ್ಚಂಗಿಪುರವನ್ನು ಆದರ್ಶಗ್ರಾಮವಾಗಿ ದತ್ತು ಸ್ವೀಕರಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರಾನುದಾನದ ಅಡಿಯಲ್ಲಿ 95 ಲಕ್ಷ ರೂ.ಗಳ ಮೊತ್ತದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಊರಿನಲ್ಲಿ ಕೈಗೊಂಡಿದ್ದಾರೆ.

Advertisement

ಶಾಲೆಗಳ ಕೊಠಡಿಗಳ ಕಟ್ಟಡಕ್ಕೆ ಶಂಕುಸ್ಥಾಪನೆ, ಬಸ್‌ ತಂಗುದಾಣಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಬೊರವೆಲ್‌ ಕೊರೆಸುವಿಕೆ, ಕೆರೆಗಳ ಹೂಳೆತ್ತುವ ಕಾರ್ಯ, ಬೀದಿ ದೀಪ ಅಳವಡಿಕೆ, ಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಸೇರಿ ಹಲವಾರು ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next