Advertisement

ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಶಾಸಕ ಭೇಟಿ

08:34 PM Apr 24, 2019 | Sriram |

ಮಹಾನಗರ: ಕುಡಿಯುವ ನೀರಿನ ಸಮಸ್ಯೆಯಿಂದ ಹೈರಾಣಾಗಿರುವ ಪ್ರದೇಶಗಳಿಗೆ ಶಾಸಕ ವೇದವ್ಯಾಸ ಕಾಮತ್‌ ಬುಧವಾರ ಭೇಟಿ ನೀಡಿದರು.

Advertisement

ಮಂಗಳಾದೇವಿ ವಾರ್ಡ್‌ ನ ಸುಭಾಷ್‌ ನಗರ ಮತ್ತು ಶಿವನಗರ ದಲ್ಲಿ ಹಲವು ದಿನಗಳ ಕಾಲ ನೀರು ಸರಬರಾಜು ನಿಂತಿರುವ ಕಾರಣ ಅಲ್ಲಿನ ಸಾರ್ವಜನಿಕರ ದೂರಿ ನನ್ವಯ ಅವರು ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಶ್ರಮಿಸುವುದಾಗಿ ಶಾಸಕ ಕಾಮತ್‌ ಹೇಳಿದ್ದಾರೆ.

ಬಿಜೆಪಿ ಮುಖಂಡರಾದ ಪ್ರೇಮಾ ನಂದ ಶೆಟ್ಟಿ, ನಿತಿನ್‌ ಕುಮಾರ್‌, ಚರಿತ್‌ ಪೂಜಾರಿ, ಹರೀಶ್‌, ಚಂದ್ರಹಾಸ್‌ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next