Advertisement

ಆಂಬ್ಯುಲೆನ್ಸ್‌ ಚಲಾಯಿಸಿದ ಕಾಗೇರಿ

09:14 PM Jun 29, 2021 | Team Udayavani |

ಶಿರಸಿ: ಕರ್ನಾಟಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಖರೀದಿಸಿದ ಆಂಬ್ಯುಲೆನ್ಸ್‌ನು° ಚಲಾಯಿಸಿ ಪಂಡಿತ್‌ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಸೋಮವಾರ ಹಸ್ತಾಂತರಿಸಿದರು.

Advertisement

ಬಳಿಕ ಮಾತನಾಡಿದ ಅವರು, ಆರೋಗ್ಯವಂತ ಕರ್ನಾಟಕ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸದೃಢರಾಗಬೇಕು. ಇದಕ್ಕಾಗಿ ವ್ಯಾಯಾಮ, ಯೋಗ, ಆಯುರ್ವೇದ, ಪೌಷ್ಟಿಕಾಂಶಗಳ ಬಳಕೆ ಮಾಡಬೇಕು. ಈಗಾಗಲೇ ಎಲ್ಲ ಶಾಸಕರಿಗೂ ಪತ್ರ ಬರೆದು ಇದಕ್ಕೆ ಸಹಕಾರ ನೀಡಲು, ಜನರಲ್ಲಿ ಜಾಗೃತಿ ಮೂಡಿಸಲು ಮನವಿ ಮಾಡಿದ್ದೇನೆ. ಕೊರೊನಾದ ಮೂರನೇ ಅಲೆ ಬಂದರೂ, ಇನ್ನಾವುದೇ ರೋಗಗಳು ಬಂದರೂ ನಮ್ಮೊಳಗೆ ಅದನ್ನು ಎದುರಿಸುವ ನಿಟ್ಟಿನಲ್ಲಿ ಸಜ್ಜಾಗಬೇಕು. ಈ ಕಾರಣದಿಂದ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಇದರ ಪ್ರಥಮ ಕಾರ್ಯಕ್ರಮ ವಿವಿಧ ಸಂಘಟನೆಗಳ ಜತೆ ಸೇರಿ ಶಿರಸಿಯಲ್ಲಿ ಜೂ.30ರಂದು ಶಿರಸಿಯಿಂದ ಈ ಅಭಿಯಾನ ಆರಂಭಿಸಲಾಗುತ್ತದೆ ಎಂದರು.

ಗಣಪತಿ ನಾಯ್ಕ, ವೀಣಾ ಶೆಟ್ಟಿ, ನಂದನ್‌ ಸಾಗರ್‌, ಡಾ| ಗಜಾನನ ಭಟ್ಟ, ಡಾ| ವಿನಾಯಕ ಕಣ್ಣಿ, ಎಂ.ಆರ್‌. ಕುಲಕರ್ಣಿ, ರಾಜೇಶ ಶೆಟ್ಟಿ, ನರಸಿಂಹ ಬಕ್ಕಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next