Advertisement

ಮೋದಿ ಸರಕಾರವು ಕಳಂಕ ರಹಿತ ಆಡಳಿತ ನೀಡಿರುವುದು ಕಾಂಗ್ರೇಸಿನ ಬುಡ ಅಲ್ಲಾಡಿಸಿದೆ

02:08 PM Apr 15, 2019 | Team Udayavani |

ಮಂಗಳೂರು: ಕಳೆದ ಐದು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳಂಕ ರಹಿತ ಆಡಳಿತ ನೀಡಿರುವುದು ಕಾಂಗ್ರೇಸಿನ ಬುಡ ಅಲ್ಲಾಡಿಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

Advertisement

ನಗರದ ಉರ್ವ ದೇರೆಬೈಲ್ ನೈರುತ್ಯ ವಾರ್ಡ್ ಬಿಜೆಪಿ ಕೈಗೊಂಡಿದ್ದ ಮೈ ಭಿ ಚಾಕಿದಾರ್ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು ಕಳೆದ ಬಾರಿ ಯುಪಿಎ ಸರಕಾರವು ಭಾರತವನ್ನು ಲೂಟಿಗೈದು ಆಂತರಿಕ ಸಂಪತ್ತನ್ನೇಲ್ಲಾ ಹಂಚಿಕೊಂಡಿದ್ದರು.ಈಗ ನರೇಂದ್ರ ಮೋದಿಜೀ ಅವರು ಲೂಟಿಕೋರರ ಜುಟ್ಟು ಹಿಡಿದಿದ್ದು,ಕಳೆದು ಹೋದ ರಾಷ್ಟ್ರದ ಸಂಪತ್ತು ಮರಳಿ ತರುವ ಪ್ರಯತ್ನ ಮಾಡುತ್ತಿದ್ದಾರೆ.ಹಾಗಾಗಿ ಕಾಂಗ್ರೇಸ್ ಪ್ರಜಾಪ್ರಭುತ್ವದ ವಿರುದ್ಧ ಮಹಾಘಟಬಂಧನ ಮಾಡಿಕೊಂಡು ಮೋದಿಜೀ ಅವರನ್ನು ಸೋಲಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ

ಪಾದಯಾತ್ರೆಯು ಉರ್ವ ಮಾರಿಗುಡಿ ದೇವಸ್ಥಾನದಿಂದ ಪ್ರಾರಂಭವಾಗಿ ಉರ್ವ ಮಾರ್ಕೇಟ್ ಮೂಲಕ ಸಾಗಿ ಮರಳಿ ಮಾರಿಗುಡಿ ದೇವಸ್ಥಾನದ ಬಳಿ ‌ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಪೇಟಾ ಧರಿಸಿ ಹೆಜ್ಜೆ ಹಾಕಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ನಾಯಕ್,ಎನ್ ಯೋಗಿಶ್ ಭಟ್,ಪ್ರೇಮಾನಂದ ಶೆಟ್ಟಿ, ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ,ರಾಜ್ ಗೋಪಾಲ್ ರೈ,ಅರುಣ್ ಉರ್ವ,ಮೋಹನ್ ಆಚಾರ್,ಸುಧೀರ್ ಬಜಿಲ್,ಕಿಶೋರ್ ಉರ್ವ,ಗಣೇಶ್ ಕುಲಾಲ್,ಯಾದವ್ ಶೆಟ್ಟಿ, ವಿಜಯ್ ಉರ್ವ,ಅಮಿತ ಕಲಾ,ಚೆನ್ನ ಕೇಶವ,ಕಿರಣ್ ಚಿಲಿಂಬಿ, ಅಜಿತ್ ಶೆಟ್ಟಿ, ಗೀತಾ,ಸುಭೋದ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next