Advertisement

ಕೊಕ್ಕಡ ಎಂಡೋಪಾಲನ ಕೇಂದ್ರಕ್ಕೆ ಶಾಸಕ ವಸಂತ ಬಂಗೇರ ಭೇಟಿ

05:01 PM Nov 30, 2017 | |

ಕೊಕ್ಕಡ : ಕರ್ನಾಟಕ ಸರಕಾರದ ಅನುದಾನದಲ್ಲಿ ಮಂಗಳೂರಿನ ಸೇವಾ ಭಾರತಿ ಸಂಸ್ಥೆಯಿಂದ ನಿರ್ವಹಣೆಗೊಳಪಡುತ್ತಿರುವ ಕೊಕ್ಕಡದ ಎಂಡೋ ಪಾಲನ ಕೇಂದ್ರಕ್ಕೆ ಬೆಳ್ತಂಗಡಿ ಶಾಸಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಇವರು ಮಂಗಳವಾರದಂದು ಭೇಟಿ ನೀಡಿದರು.

Advertisement

ಎಂಡೋ ಪಾಲನಾ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಮಾತನಾಡಿಸಿದ ಅವರು ಸಂಸ್ಥೆಯನ್ನು ನಿರ್ವಹಿಸುತ್ತಿರುವ ಬಗ್ಗೆ ವಿವರಗಳನ್ನು ಕೇಳಿ ಪಡೆದುಕೊಂಡರು. ಈ ಸಂದರ್ಭ ಸೇವಾ ಭಾರತಿಯ ಸಿಬಂದಿಗಳು ಶಾಸಕರಿಗೆ ಮಾಹಿತಿ ನೀಡಿ ಸರಕಾರದಿಂದ ಇಲ್ಲಿನ ಸಂತ್ರಸ್ತರಿಗೆ ತಲಾ ಒಬ್ಬರಿಗೆ ಇಂತಿಷ್ಟು ಎಂದು ನೀಡುವ ಮೊತ್ತದಿಂದಲೂ ಸ್ವಲ್ಪ ಅಧಿಕ ವೆಚ್ಚಬೇಕಾಗುತ್ತಿದ್ದು ಇದನ್ನು ಸದ್ಯದ ಮಟ್ಟಿಗೆ ಸೇವಾಭಾರತಿಯೇ ಭರಿಸಿಕೊಳ್ಳುತ್ತಿದೆ. ಇಲ್ಲಿನ ಪಾಲನ ಕೇಂದ್ರದಲ್ಲಿ ದಿನವಹಿ ಸಂತ್ರಸ್ತರಿಗೆ ನೀಡಲಾಗುತ್ತಿರುವ ಆಹಾರ ಮತ್ತಿತರ ಕೌಶಲಾಭಿವೃದ್ದಿಯ ಬಗ್ಗೆ ಶಾಸಕರಿಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು ನಿರ್ವಹಣೆಯಲ್ಲಿ ಅಧಿಕ ವೆಚ್ಚವಾಗುತ್ತಿದ್ದಲ್ಲಿ ಅದನ್ನುಸೇವಾಭಾರತಿ ಸಂಸ್ಥೆಯಿಂದ ಪತ್ರ ಮೂಲಕ ತನಗೆ ಮನವಿ ನೀಡಿದಲ್ಲಿ ಸರಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಈ ಸಂದರ್ಭ ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್‌, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಗ್ರಾಮಕರಣಿಕ ರೂಪೇಶ್‌, ಸದಸ್ಯರಾದ ಇಬ್ರಾಹಿಂ ಸೌತಡ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next