Advertisement

ಫೀವರ್‌ ಕ್ಲಿನಿಕ್‌ಗಳ ಮೂಲಕ ಸೋಂಕಿತರಿಗೆ ನೆರವು

11:20 AM Jun 01, 2021 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಫಿ‚àವರ್‌ ಕ್ಲಿನಿಕ್‌ ಮಾಡಿ ಪ್ರತಿ ಗ್ರಾಮದಲ್ಲೂ ಪರೀಕ್ಷೆಗೆ ಒಳಪಡಿಸಿದ ಪರಿಣಾಮವಾಗಿ ಹಾಗೂ ಯಾವುದೇ ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಎಲ್ಲರಿಗೂ ತಪಾಸಣೆ ಮಾಡಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲಾ ಗುತ್ತಿದೆ. ಈ ನಿಟ್ಟಿನಲ್ಲಿ ವಾರಿಯರ್ ಸೇರಿ ದಂತೆ ಟಾಸ್ಕ್ಫೋರ್ಸ್‌ ಕೂಡ ಶ್ರಮಿಸುತ್ತಿದೆ ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್‌ ಬಚ್ಚೇಗೌಡ ಅವರು ಉದಯವಾಣಿಗೆ ನೀಡಿರುವ ಕಿರು ಸಂದರ್ಶನದಲ್ಲಿ ಹೇಳಿದರು.

Advertisement

ಕೋವಿಡ್ ಪರಿಸ್ಥಿತಿ ನಿಮ್ಮಕ್ಷೇತ್ರದಲ್ಲಿ ಹೇಗಿದೆ?

ಹೊಸಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಮೊದಲ ಅಲೆಗಿಂತ2ನೇ ಅಲೆ ತೀರ್ವವಾಗಿದ್ದು, ಪ್ರತಿ ದಿನ 100 ರಿಂದ 200 ಪ್ರಕರಣಗಳು ಬರುತ್ತಿತ್ತು. ಹಾಸಿಗೆಗಳ ಸಮಸ್ಯೆ, ರೆಮ್‌ಡೆಸಿವಿಯರ್‌ ಇಂಜೆಕ್ಷನ್‌, ವೆಂಟಿ ಲೇಟರ್‌, ಆಕ್ಸಿಜನ್‌ ಸಮಸ್ಯೆಗಳು ನಮ್ಮನ್ನು ಕಾಡಿತು. ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಸ್ಕೆ ತೆಗೆದುಕೊಂಡು 700 ಹಾಸಿಗೆಗಳನ್ನು ಪಡೆದು ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾದೆವು. ಜನರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸವನ್ನು ತಾಲೂಕಿನಲ್ಲಿ ಮಾಡಲಾಯಿತು.300ಕೇಸ್‌ ಈಗ 100-120ಕೇಸ್‌ ಗಳಿಗೆ ಇಳಿಸಿದ್ದೇವೆ. ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲೂ ಆರೈಕೆ ನಡೆಯುತ್ತಿದೆ.

ಕೋವಿಡ್‌ ಸಂಕಷ್ಟಗಳಿಗೆ ಪರಿಹಾರ ಸಿಕ್ಕಿದೆಯೇ?

ತಾಲೂಕಿನಲ್ಲಿ 250 ಜನ ತಮ್ಮ ಪ್ರಾಣ ಕಳೆದುಕೊಂಡರು. ಒಂದೊಂದು ಕುಟುಂಬಗಳೂ ಸಾಕಷ್ಟು ನೋವು ಅನುಭವಿಸಿದೆ. ಆಕ್ಸಿಜನ್‌, ವೆಂಟಿ ಲೇಟರ್‌ ಸಿಗದೆ ಮೃತಪಟ್ಟವರು, ಭಯಭೀತರಾಗಿ ಮೃತರಾದವರು ಹೀಗೆ ಅನೇಕ ಪ್ರಕರಣಗಳಿವೆ. ಆಮ್ಲಜನಕ ಪೂರೈಕೆ, ವೆಂಟಿಲೇಟರ್‌ ಪೂರೈಕೆ, ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದು ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡರೆ ಅನುಕೂಲ ಸಾಧ್ಯ.

Advertisement

ಕೋವಿಡ್‌ ವಿಚಾರದಲ್ಲಿ ನಿಮ್ಮಕೊಡುಗೆ ಏನು?

ಪ್ರತಿ ವಾರವೂ ಅಧಿಕಾರಿಗಳ ಸಭೆ ಕರೆದು ತಹಶೀಲ್ದಾರ್‌, ತಾಪಂ, ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೆವು. ಅವರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿದಿನವೂ ಮನೆಮನೆಗೆ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. 2 ತಿಂಗಳಿಂದ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ನಮ್ಮ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದೇನೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್‌ ಕ್ಯಾಂಪ್‌ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಫೀವರ್‌ ಕ್ಯಾಂಪ್‌ ಮಾಡಿದಂತೆ ವ್ಯಾಕ್ಸಿನ್‌ ಕ್ಯಾಂಪ್‌ಗಳನ್ನು ತೆರಯಲಾಗುವುದು. ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನನ್ನ ವೈಯಕ್ತಿಕ ಹಣದಲ್ಲಿ ರೂ. 5 ಲಕ್ಷ ವೆಚ್ಚದ ಎಚ್‌ಎಂಎಎನ್‌ಸಿ ಯಂತ್ರವನ್ನು ಕೆಂಪಣ್ಣ ಆಸ್ಪತ್ರೆಗೆ ವೈಯಕ್ತಿವಾಗಿ ವಿತರಿಸಲಾಯಿತು. ಖಾಸಗಿ ಆಸ್ಪತ್ರೆಗೆ ಬಿಪಾಪ್‌ ಆಕ್ಸಿಜನ್‌ ಯಂತ್ರ ವೈಯಕ್ತಿಕವಾಗಿ ನೀಡಲಾಗಿದೆ. ಆಕ್ಸಿಜನ್‌ ಕಾನ್ಸೆನ್‌ ಟ್ರೇಟರ್‌, ಪಿಎಸ್‌ಆರ್‌ ಅನುದಾನ ಹಾಗೂ ದಾನಿಗಳ ಸಹಕಾರದಿಂದ 60-70 ಲಕ್ಷಬೆಲೆಬಾಳುವ ಆಕ್ಸಿಜನ್‌ ಕನ್ವರ್ಟರ್‌, ಮೆಡಿಕಲ್‌ ಸಾಮಗ್ರಿಗಳು, ಪಿಪಿಇ ಕಿಟ್‌, ಮಾಸ್ಕ್, ಸ್ಯಾನಿಟೈಸರ್‌, ಔಷಧಿಗಳು, ಐಸಿಯುನಲ್ಲಿಆಕ್ಸಿಜನ್‌ಲಿಕ್ವಿಡ್‌ಗಳನ್ನುನೀಡಲಾಗಿದೆ. ವಾರಿಯರ್ಗಳಿಗೆ ದಿನಸಿ ಕಿಟ್‌ ವಿತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ?

ಹೊಸಕೋಟೆ ತಾಲೂಕಿನಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದೆ. ಎಂವಿಜೆ ಆಸ್ಪತ್ರೆ, ಜಡಿಗೇನಹಳ್ಳಿಯಲ್ಲಿನ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ಸಮಸ್ಯೆ ಪರಿಶೀಲಿಸಿ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಲಾಗಿದೆ.

ಪ್ರಸ್ತುತ ಒಬ್ಬ ವ್ಯಕ್ತಿಯಾಗಿ ಸೋಂಕಿತರಿಗೆ ನಿಮ್ಮ ಸಲಹೆ?

ಕೋವಿಡ್‌ ಸೋಂಕು ಬಂದಕೂಡಲೇ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ಧೈರ್ಯದಿಂದಕಾಲಕಾಲಕ್ಕೆಔಷಧೋಪಚಾರಗಳನ್ನು ಪಡೆದು ಗುಣಮುಖರಾಗಬೇಕು. ಕೊರೊನಾ 2ನೇ ಅಲೆ ಭೀಕರವಾಗಿದ್ದು ತೀವ್ರವಾಗಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ, ಎಚ್ಚರಿಕೆ ಇರಲಿ. ಕಡ್ಡಾಯವಾಗಿ ಲಸಿಕೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯಿರಿ. ಸರ್ಕಾರದ ಮಾರ್ಗಸೂಚಿ ಪಾಲಿಸಿ.

ಪೊಲೀಸ್‌, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರನ್ನು ಪ್ರತಿಯೊಬ್ಬರನ್ನು ಸ್ಮರಿಸಬೇಕು. ಸರ್ಕಾರ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಡವಿದೆ. ತಜ್ಞರು 2ನೇ ಅಲೆ ಬರುತ್ತಿದೆ ಎಂದರೂ ಸೋಂಕಿತರಿಗೆ ಬೆಡ್‌ ವ್ಯವಸ್ಥೆ, ಆಕ್ಸಿಜನ್‌, ವೆಂಟಿಲೇಟರ್‌, ರೆಮಿಡಿಸಿವರ್‌ ಚುಚ್ಚುಮದ್ದು ಹೀಗೆ ನೀಡುವುದರಲ್ಲಿ ಸರ್ಕಾರ ವಿಫ‌ಲವಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣ ಮಾಡಿದರು. ಲಸಿಕೆಗಳಿಗೂ ಪರದಾಡುವಂತಾಗಿದೆ.- ಶರತ್‌ ಬಚ್ಚೇಗೌಡ, ಶಾಸಕರು, ಹೊಸಕೊಟೆ ವಿಧಾನಸಭಾ ಕ್ಷೇತ ● ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next