Advertisement
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ಇವರುಗಳು ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮು ದ್ವೇಷ ಹಬ್ಬುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ನನ್ನ ಪುತ್ರ, ತಮ್ಮನ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಸದನದಲ್ಲಿ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದೆ ಎಂದಿದ್ದಾರೆ.
Related Articles
Advertisement
ಭದ್ರಾವತಿಯಲ್ಲಿ ಬಿಜೆಪಿ ನೆಲಕಚ್ಚಿದೆ. ಅಲ್ಲಿ 15 ವಿಧಾನಸಭಾ ಚುನಾವಣೆ ನಡೆದಿವೆ. ಇಲ್ಲಿವರೆಗೆ ಬಿಜೆಪಿ ತಳವೂರಲು ಸಾಧ್ಯವಾಗಿಲ್ಲ. ಅದಕ್ಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಆರೋಪ ಮಾಡಿದರು.
ನಾನು ಕೂಡ ಹಿಂದೂ, ದೇಶದಲ್ಲಿ ಇರುವ ಎಲ್ಲರೂ ಭಾರತೀಯರೇ. ಶ್ರೀರಾಮನ ನಿಜವಾದ ಭಕ್ತರು ಕಾಂಗ್ರೆಸ್ ನವರು. ಇವರಂತೆ ಡೋಂಗಿ ಭಕ್ತಿಯನ್ನು ನಾವು ತೋರಿಸಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ ಆರೋಪಿಸಿದರು.
ಇದನ್ನೂ ಓದಿ: ನನ್ನ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ:ಸಿಎಂ ಕುಟುಂಬದ ವಿರುದ್ಧ ಶಾಸಕ ಸಂಗಮೇಶ್ ಆರೋಪ
ನಮ್ಮ ಮನೆ ಮುಂದೆ 500 ಪೊಲೀಸರನ್ನು ಇಟ್ಟಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಬೇಕಾ? ಅವರ ಕನಸು ಯಾವತ್ತೂ ಉದ್ಧಾರವಾಗಲ್ಲ, ಬಿಜೆಪಿಯವರಿಗೆ ಭದ್ರಾವತಿಯಲ್ಲಿ ಅಭ್ಯರ್ಥಿಯೇ ಇಲ್ಲ, ಕೋಮುವಾದಿಗಳನ್ನು ಭದ್ರಾವತಿಯವರು ಸಹಿಸಲ್ಲ ಎಂದು ಶಾಸಕ ಸಂಗಮೇಶ್ ಆಕ್ರೋಶ ಹೊರಹಾಕಿದರು.