Advertisement

ತಮ್ಮ ಮೇಲಿನ ಆರೋಪಕ್ಕೆ ನೊಂದು ಕಣ್ಣಿರಿಟ್ಟ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ

12:58 PM Feb 07, 2022 | Team Udayavani |

ಕಲಬುರಗಿ: ನಾನು ಯಾವುದೇ ತಪ್ಪು ಮಾಡಿಲ್ಲ. ಜನರಿಗಾಗಿ, ದೇಶಕ್ಕಾಗಿ ದುಡಿಯುವ ನನ್ನಂಥವರ ಮೇಲೆ ಆರೋಪ ಸರಿಯಲ್ಲ ಅಂತ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಕಣ್ಣೀರು ಹಾಕಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆ ಹಾಗೂ ಅವರ ಹಿಂದಿನ ತಂಡದ ಬ್ಲ್ಯಾಕ್ ಮೇಲ್ ವಿರುದ್ದ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಇದೇ ರೀತಿ ಬ್ಲ್ಯಾಕ್‌ ಮೇಲ್ ಗೆ ಮುಂದಾಗಲಾಗಿತ್ತು ಎಂದರು.

ಪ್ರಮುಖವಾಗಿ ತಾವು ಯಾವುದೇ ತಪ್ಪು ಮಾಡಿಲ್ಲ. ಸರಕಾರ ಯಾವುದೇ ರೀತಿಯ ತನಿಖೆ ನಡೆಸಲಿ. ತಪ್ಪಿತಸ್ಥರು ಯಾರೇ ಇದ್ರೂ ಕ್ರಮ ಕೈಗೊಳ್ಳಲಿ.‌ ನಾನು ನಿರಂತರ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಈ ಬಗ್ಗೆ ಈಗಾಗಲೇ ಬೆಂಗಳೂರಿನ ವಿಧಾನಸೌಧ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ಕಾನೂನು ಹೋರಾಟಕ್ಕೆ ಸದಾ ಸಿದ್ದನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಶಾಲೆ ಗೇಟ್ ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕರಾರಿಲ್ಲ. ಆದರೆ…: ಸಚಿವ ಬಿ.ಸಿ. ನಾಗೇಶ್

ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ. ಇಂತಹ ಕೆಲಸ ನಾನು ಮಾಡುವುದೂ ಇಲ್ಲ. ಪಕ್ಷಕ್ಕೆ ಕಾರ್ಯಕರ್ತರಿಗೆ ಮತದಾರರಿಗೆ ಮುಜುಗರ ತರುವ ಕೆಲಸ ನನ್ನಿಂದ ಆಗಿಲ್ಲ ಎಂದು ತೇಲ್ಕೂರ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next