Advertisement

ಮಳೆಯಲ್ಲೇ ನಿಂತು ಸೋಂಕಿತರ ಮನವೊಲಿಸಿದ ಶಾಸಕ ರಾಜೇಶ್‌ಗೌಡ

06:40 PM May 13, 2021 | Team Udayavani |

ಶಿರಾ: ಸುರಿವ ಮಳೆ ಲೆಕ್ಕಿಸದೆ ಶಾಸಕರಾದ ರಾಜೇಶ್‌ಗೌಡ ಸೋಂಕಿತರ ಮನವೊಲಿಸಿ ಶಿರಾ ಕೋವಿಡ್‌ ಕೇರ್‌ ಸೆಂಟ ರ್‌ಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

Advertisement

ತಾಲೂಕಿನ ಗೌಡಗೆರೆ ಹೋಬಳಿಯ ಮದ್ದಕ್ಕನಹಳ್ಳಿ ಗ್ರಾಮದ ಮೈಕ್ರೋ ಕಂಟೈನ್ಮೆಂಟ್‌ ಝೋನ್‌‌ಲ್ಲಿ ಸೋಂಕಿತರ ನಿರ್ಲಕ್ಷ್ಯದಿಂದ ಕೊರೊನಾ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದನ್ನರಿತ ಶಾಸಕರು, ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಮಳೆ ಬರುತ್ತಿದ್ದರೂ ಬೀದಿ ಬೀದಿ ಸುತ್ತಿ ಕೋವಿಡ್‌ ಕೇರ್‌ ಸೆಂಟರ್‌ಗೆ ಬನ್ನಿ, ಇದರಿಂದ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ ಎಂದು ಮನವೊಲಿಸಿ ಕರೆದು ಕೊಂಡು ಹೋದರು.

ಶಾಸಕರಾದ ರಾಜೇಶ್‌ಗೌಡ ಮಾತನಾಡಿ, ಶಿರಾ ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಸೋಂಕಿತರು ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆದರೆ ಶೀಘ್ರ ಗುಣಮುಖರಾಗಬಹುದು ಎಂದರು. ತಹಶೀಲ್ದಾರ್‌ ಎಂ.ಮಮತಾ, ಪಿಎಸ್‌ಐ ಪಾಲಾಕ್ಷ ಪ್ರಭು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next