Advertisement

ವಯೋವೃದ್ದನ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ನೀಡಿದ ದೇಶಪಾಂಡೆ

08:51 PM Jul 25, 2021 | Team Udayavani |

ದಾಂಡೇಲಿ: ನಾನು ವಯೋವೃದ್ದನಿದ್ದೇನೆ. ನನಗಿನ್ನೂ ವೃದ್ದಾಪ್ಯವೇತನ ಬಂದಿಲ್ಲ. ಕಳೆದ ಒಂದು ವರ್ಷದಿಂದ ವೃದ್ದಾಪ್ಯ ವೇತನ ಬರದೇ ತೀವ್ರ ಸಂಕಷ್ಟದಲ್ಲಿದ್ದೇನೆ. ನನಗೆ ಸರಕಾರದಿಂದ ಸಿಗುತ್ತಿರುವ ವೃದ್ದಾಪ್ಯವೇತನವನ್ನು ಕೊಡಿಸಿ ಎಂದು ಮನವಿ ಮಾಡಿದ ತಕ್ಷಣವೆ ಶಾಸಕ ಆರ್.ವಿ.ದೇಶಪಾಂಡೆಯವರು ಅಲ್ಲೆ ಇದ್ದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರನ್ನು ಕರೆದು ಇವರ ಮಾಹಿತಿಯನ್ನು ಪಡೆದು ತ್ವರಿತಗತಿಯಲ್ಲಿ ವೃದ್ದಾಪ್ಯವೇತನವನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ, ವಾರದೊಳಗೆ ಪೆನ್ಸನ್ ಬರುತ್ತದೆ, ಟೆನ್ಸನ್ ಮಾಡ್ಬೇಡಿ ಎಂದು ಬೆನ್ನು ತಟ್ಟಿ ಸಮಾಧಾನ ಪಡಿಸಿದರು.

Advertisement

ನೊಂದ ಹಿರಿಯ ಜೀವಕ್ಕೆ ಮಿಡಿದ ಹಿರಿಯ ಶಾಸಕ ದೇಶಪಾಂಡೆಯವರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿಯ್ತು. ಅಂದ ಹಾಗೆ ಇದು ನಡೆದದ್ದು, ಇಂದು ದಾಂಡೇಲಿ ನಗರದ ಟೌನಶೀಪಿನಲ್ಲಿ ಕಾರ್ಮಿಕರಿಗೆ ಅವಶ್ಯ ವಸ್ತುಗಳ ಕಿಟ್ ಸಮಾರಂಭಕ್ಕೆ ಆಗಮಿಸಿ ಹೊರಡುತ್ತಿರುವಾಗ ಶಾಸಕ ದೇಶಪಾಂಡೆಯವರ ಬಳಿ ಬಂದ ವಯೋವೃದ್ದರೊಬ್ಬರು ಮನವಿ ಮಾಡಿಕೊಂಡು ಸಫಲರಾಗಿದ್ದು ಹೀಗೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next