Advertisement

ಸಂಪುಟ ವಿಸ್ತರಣೆಗೆ ನಮಗೇನೂ ಆತುರ ಇಲ್ಲ: ಶಾಸಕ ನಾರಾಯಣ ಗೌಡ

04:41 PM Dec 13, 2019 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆಗೆ ವಿಳಂಬವಾಗಿಲ್ಲ. ಅದಕ್ಕಾಗಿ ನಮಗೇನೂ ಆತುರವೂ ಇಲ್ಲ. ನನಗೆ ಯಾವ ಖಾತೆ ಕೊಟ್ಟರೂ ಆಶೀರ್ವಾದ ಅಂತ ಸ್ವೀಕರಿಸುತ್ತೇನೆ. ಎಂದು ಶಾಸಕ ನಾರಾಯಣ ಗೌಡ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಸಂಸತ್ ಅಧಿವೇಶನ ನಡಿಯುತ್ತಿದೆ. ನಂತರ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. ಡಿಸಿಎಂ ಹುದ್ದೆಯ ಬಗ್ಗೆ ಮಾತನಾಡಿ, ಉಪಮುಖ್ಯಮಂತ್ರಿ ಪಟ್ಟ ಯಾರಿಗೆ ಅನ್ನೋದರ ಬಗ್ಗೆ ನಾನು ಮಾತಾಡಲ್ಲ ಎಂದರು.

ಹುಣಸೂರು ಕ್ಷೇತ್ರ ಸೋಲಿನ ಬಗ್ಗೆ ಮಾತನಾಡಿದ ನಾರಯಣ ಗೌಡ, ವಿಶ್ವನಾಥ್ ಸೋಲು ನೋವು ತಂದಿದೆ. ನಾವೆಲ್ಲ ವಿಶ್ವನಾಥ್ ಜೊತೆಗಿದ್ದೇವೆ.  ಮುಖ್ಯಮಂತ್ರಿಗಳು ಕೂಡಾ ವಿಶ್ವನಾಥ್ ಕೈ ಬಿಡಲ್ಲ‌ ಅಂದಿದ್ದಾರೆ. ಸೋಲನುಭವಿಸಿದ ವಿಶ್ವನಾಥ್, ಎಂಟಿಬಿಗೆ ಅನ್ಯಾಯ ಆಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next