Advertisement
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಜೆಡಿಎಸ್ ಸಹಯೋಗದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಜವಾಬ್ದಾರಿ ನಮ್ಮದು: ಕಳೆದ ವಿಧಾನಸಭೆ ಚುನಾ ವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ಗೆ ಕೇವಲ 8 ಸಾವಿರ ಮತಗಳ ಅಂತರದ ಲೀಡ್ ಸಿಕ್ಕಿದೆ. ಈ ಬಾರಿ ಆ ಸಂಖ್ಯೆ 50 ಸಾವಿರ ಮತಗಳ ಅಂತರಕ್ಕೇರ ಬೇಕು. ಇದು ಒಬ್ಬರು ಇಬ್ಬರಿಂದ ಆಗುವ ಕೆಲಸ ವಲ್ಲ. ಎಲ್ಲರೂ ಒಗ್ಗೂಡಿದಾಗ ಮಾತ್ರ ನಾವು ಗೆಲ್ಲಲು ಸಾಧ್ಯ. ಸತತ ಮೂರು ಬಾರಿ ಜಯಭೇರಿ ಬಾರಿಸಿರುವ ಶಾಸಕ ಎಂ.ಶ್ರೀನಿವಾಸ್ ಜನಾನುರಾಗಿ ಕೆಲಸ ನಿರ್ವಹಿಸಿರುವ ಅವರನ್ನು ನಾಲ್ಕನೇ ಬಾರಿಯೂ ಗೆಲ್ಲಿಸುವ ಮೂಲಕ ಸಚಿವರ ನ್ನಾಗಿ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಜೆಡಿಎಸ್ ಮಹಿ ಳಾಧ್ಯಕ್ಷೆ ಮಂಜುಳಾ ಉದಯ ಶಂಕರ್, ನಗರ ಘಟ ಕದ ಅಧ್ಯಕ್ಷ ಎಸ್.ಪಿ.ಗೌರೀಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ನಗರಸಭೆ ಸದಸ್ಯರಾದ ನಾರಾಯಣ್, ನಾಗೇಶ್, ಮುಖಂಡ ರಾದ ಲೋಕೇಶ್, ಎಚ್.ಎನ್.ಯೋಗೇಶ್, ಗೌರೀಶ್, ಜಯರಾಂ, ವಿಶಾಲರಘು ಇದ್ದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಅಭ್ಯರ್ಥಿಯಾಗಿದ್ದು, ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಮುಂದಿನ ಒಂದು ವಾರದೊಳಗೆ ವರಿಷ್ಠರೇ ಎಲ್ಲರನ್ನು ಸಭೆಗೆ ಕರೆದು ಗೊಂದಲ ನಿವಾರಣೆ ಮಾಡಲಿದ್ದಾರೆ. -ಎಚ್.ಎನ್.ಯೋಗೇಶ್, ಜಿಪಂ ಮಾಜಿ ಸದಸ್ಯ