Advertisement

Mangaluru: ಚುನಾವಣೆ ಸ್ಪರ್ಧಿಸುವ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದೇನು…?

04:52 PM Mar 09, 2024 | Team Udayavani |

ಮಂಗಳೂರು: ಕೆಲವು ಕ್ಷೇತ್ರಗಳಿಗೆ ಸಚಿವರು ಸ್ಪರ್ಧಿಸಿದರೆ ಲಾಭವಿದೆ ಎನ್ನುವ ಅಭಿಪ್ರಾಯವಿದೆ. ಆದರೆ ಯಾರು ಸ್ಪರ್ಧಿಸಬೇಕು‌ ಎನ್ನವುದನ್ನು ಪಕ್ಷದ ವರಿಷ್ಠರು, ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.

Advertisement

ನಾನು ಈಗಾಗಲೇ 2009ರಲ್ಲಿ ಶಾಸಕನಾಗಿದ್ದಾಗ ಸ್ಪರ್ಧಿಸಿದ್ದೆ. 2019 ರಲ್ಲಿಯೂ ಸ್ಪರ್ಧಿಸಿದ್ದೆ. ಎರಡೂ ಬಾರಿ ಸೋತಿದ್ದೇನೆ. ಈ ಬಾರಿ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ವರಿಷ್ಠರಿಗೆ ಅಭಿಪ್ರಾಯ ತಿಳಿಸಿದ್ದೇನೆ ಎಂದರು.

ಪಾಕ್ ಪರ ಘೋಷಣೆ ಮತ್ತು ಕೆಫೆ ಬಾಂಬ್ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರ ವಾಸ್ತವಾಂಶದ ಅಧಾರದಲ್ಲಿ ತನಿಖೆಗೆ ಎಲ್ಲ‌ ಕ್ರಮ ಕೈಗೊಂಡಿದೆ ಎಂದರು.

ಇದನ್ನೂ ಓದಿ: UP; ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next