Advertisement

ಅನಾಥ ವಿದ್ಯಾರ್ಥಿನಿಗೆ ಶಾಸಕರಿಂದ ನೆರವು

03:45 PM Sep 22, 2019 | Suhan S |

ತುಮಕೂರು: ತಾಲೂಕಿನ ಗೂಳೂರು ಹೋಬಳಿಯ ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದ್ದು, ಅಜ್ಜಿಯನ್ನು ಕಳೆದುಕೊಂಡು ಅನಾಥಳಾದ ಮೊಮ್ಮಗಳಿಗೆ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್‌ ನೆರವಾಗಿದ್ದಾರೆ.

Advertisement

ಹೊನ್ನುಡಿಕೆ ಗ್ರಾಮದ ವೃದ್ಧೆ ತಿಮ್ಮಕ್ಕ (70) ತರಕಾರಿ ವ್ಯಾಪಾರಿ ಮಾಡಿಕೊಂಡು ಜೀವನ ನಡೆಸುತ್ತ ಮೊಮ್ಮಗಳು ಗೀತಾಳನ್ನು ತುಮಕೂರಿನ ಎಂಪ್ರಸ್‌ ಕಾಲೇಜಿನಲ್ಲಿ ಪಿಯುಸಿ ಓದಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾದ ತಿಮ್ಮಕ್ಕ ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂ ತೆರಳಿದ್ದಾರೆ. ವೈದ್ಯರಿಲ್ಲದ ಕಾರಣ ನರ್ಸ್‌ಗಳೇ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫ‌ಲಕಾರಿಯಾಗದೇ ತಿಮ್ಮಕ್ಕ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ಅಜ್ಜಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಗೀತಾಗೆ ಸಾಂತ್ವನ ಹೇಳಿದ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್‌ ಓದಿನ ಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಗೀತಾಳಿಗೆ ಎರಡು ಲಕ್ಷದ ಚೆಕ್‌ ಹಾಗೂ ಹತ್ತು ಸಾವಿರ ರೂ. ಸಹಾಯಧನ ನೀಡಿದ್ದಾರೆ.

ಆಸ್ಪತ್ರೆಯಲ್ಲಿರದ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ಜೆಡಿಎಸ್‌ ಮುಖಂಡರಾದ ಹಾಲನೂರು ಅನಂತ್‌ಕುಮಾರ್‌, ಹೊನ್ನುಡಿಕೆ ವೆಂಕಟೇಶ್‌, ಕೃಷ್ಣಪ್ಪ, ಅರೇಹಳ್ಳಿ ಮೂರ್ತಿ, ಲಕ್ಷಿ ¾àನಾರಾಯಣ್‌, ಮಂಚ ಕಲ್‌ಕುಪ್ಪೆ ಯೋಗೀಶ್‌ ಇತರರಿದ್ದರು. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಧರ್‌ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next