Advertisement

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

09:11 PM Sep 20, 2024 | Team Udayavani |

ಕಾಸರಗೋಡು: ಮಾಜಿ ಸಚಿವ, ಕಾಂಞಂಗಾಡ್‌ ಶಾಸಕ ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ವೆಳ್ಳರಿಕುಂಡ್‌ ತಾಲೂಕಿನ ಡೆಪ್ಯೂಟಿ ತಹಶೀಲ್ದಾರ್‌, ಕಾಂಞಂಗಾಡ್‌ ನಿವಾಸಿ ಎ. ಪವಿತ್ರನ್‌ನನ್ನು ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಅಮಾನತುಗೊಳಿಸಿದ್ದಾರೆ.

Advertisement

ಸೆ. 12ರಂದು ಇ. ಚಂದ್ರಶೇಖರನ್‌ ಅವರನ್ನು ಆಕ್ಷೇಪಿಸುವ ರೀತಿಯಲ್ಲಿನ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿತ್ತು. ತನ್ನನ್ನು ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸುತ್ತಿರುವುದಾಗಿ ಚಂದ್ರಶೇಖರನ್‌ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಗಂಟೆಗಳೊಳಗೆ ಈ ಪೋಸ್ಟ್‌ ಅನ್ನು ಹಿಂಪಡೆದ ಪವಿತ್ರನ್‌ ಮುಂದಿನ ದಿನ ನನ್ನಿಂದ ತಪ್ಪಾಗಿದೆ ಎಂದು ವಿವರಣೆಯನ್ನು ನೀಡಿದ್ದರು. ಆದರೆ ಇದರ ಮೊದಲು ಹಲವು ಬಾರಿ ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಪವಿತ್ರನ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿರುವುದಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಇದು ಶಿಸ್ತು ಉಲ್ಲಂಘನೆ ಹಾಗೂ ಕಂದಾಯ ಇಲಾಖೆಗೆ ಕಳಂಕ ಉಂಟು ಮಾಡುವುದಾಗಿದೆ ಎಂದು ಜಿಲ್ಲಾಧಿಕಾರಿ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next