Advertisement

ನಿಯಮ ಉಲ್ಲಂಘನೆ: ಶಾಸಕ ಅನ್ನದಾನಿಗೆ ದಂಡ

06:25 AM Sep 29, 2018 | Team Udayavani |

ಮಳವಳ್ಳಿ: ಕಾರ್ಮಿಕ ಕಾಯ್ದೆ ನಿಯಮ ಉಲ್ಲಂಘಿಸಿ ಬಾರ್‌ ಮತ್ತು ರೆಸ್ಟೋರೆಂಟ್‌ ನಡೆಸುತ್ತಿದ್ದ ಆರೋಪದ ಮೇಲೆ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಚಾರಣಾ ವಿಶೇಷ ನ್ಯಾಯಾಲಯ 2900ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 15 ದಿನ ಜೈಲು ಶಿಕ್ಷೆ ಅನುಭವಿಸುವಂತೆ ಅದೇಶಿಸಿದೆ. 

Advertisement

ತಾಲೂಕಿನ ಶಿವನ ಸಮುದ್ರದಲ್ಲಿ ಗಗನಚುಕ್ಕಿ ಬಾರ್‌ ಮತ್ತು ರೆಸ್ಟೋರೆಂಟ್‌ ಮೇಲೆ 25ನೇ ಮಾರ್ಚ್‌ 2014ರಂದು ಸಂಜೆ 5 ಗಂಟೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ವೇಳೆ ನಿಯಮ ಉಲ್ಲಂಘನೆ ಕಂಡು ಬಂದಿತ್ತು. ಬಾರ್‌ ನೋಂದಣಿ ಮತ್ತು ಪ್ರಮಾಣ ಪತ್ರವನ್ನು ಫ‌ಲಕದಲ್ಲಿ ಪ್ರದರ್ಶನ ಮಾಡಿರಲಿಲ್ಲ.ನೋಂದಣಿ ದಾಖಲಾತಿ ನಿರ್ವಹಣೆ ಮಾಡಿಲ್ಲ, ಬಾರ್‌ ಕಾರ್ಮಿಕರಿಗೆ ವಾರದ ರಜೆ ನೀಡಿಲ್ಲ, ಕಾರ್ಮಿಕರ ಹಾಜರಾತಿ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸಿ ಡಾ.ಅನ್ನದಾನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ನಂತರ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗವಣೆ ಮಾಡಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next