ನವದೆಹಲಿ: “ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ” ಎಂದು ಕೇಂದ್ರ ಬಜೆಟ್ ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024 ರ ರಾಷ್ಟ್ರೀಯ ಚುನಾವಣೆಯ ಹಿಂದಿನ ಕೊನೆಯ ಪೂರ್ಣ ಬಜೆಟ್, ತೆರಿಗೆದಾರರಿಗೆ ಭಾರಿ ಪರಿಹಾರವನ್ನು ಮತ್ತು ಬಂಡವಾಳ ವೆಚ್ಚ ಮತ್ತು ಮೂಲಸೌಕರ್ಯಕ್ಕಾಗಿ ಭಾರಿ ವೆಚ್ಚವನ್ನು ಒದಗಿಸಿದೆ ಎಂದಿದ್ದಾರೆ.
“ಮಿತ್ರ್ ಕಾಲ್’ ಬಜೆಟ್ ನಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಯಾವುದೇ ದೃಷ್ಟಿ ಇಲ್ಲ, ಬೆಲೆಯೇರಿಕೆ ನಿಭಾಯಿಸಲು ಯಾವುದೇ ಯೋಜನೆ ಇಲ್ಲ ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ 1% ಶ್ರೀಮಂತರು 40% ಸಂಪತ್ತು, 50% ಬಡವರು 64% ಜಿಎಸ್ ಟಿ , 42% ಯುವಕರು ನಿರುದ್ಯೋಗಿಗಳು. ಆದರೂ, ಪ್ರಧಾನಿ ಟಿ ಕೇರ್! ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಅಮೃತ್ ಕಾಲದ ಮೊದಲ ಬಜೆಟ್ ಸಮಾಜದ ಕನಸುಗಳನ್ನು ಈಡೇರಿಸಲಿದೆ: ಪ್ರಧಾನಿ ಮೋದಿ
Related Articles
ಭರವಸೆಗಳಿಗೆ ದ್ರೋಹ
ಕೇಂದ್ರ ಬಜೆಟ್ ಬಹುಪಾಲು ಭಾರತೀಯರ ಭರವಸೆಗಳಿಗೆ ದ್ರೋಹ ಮಾಡಿದೆ ಮತ್ತು ಸರ್ಕಾರವು ಜನರಿಂದ ಎಷ್ಟು ದೂರದಲ್ಲಿದೆ? ಜೀವನ, ಜೀವನೋಪಾಯ, ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆಯ ಬಗ್ಗೆ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಬುಧವಾರ ಹೇಳಿದ್ದಾರೆ.