Advertisement

ಉಳ್ಳಾಲದಲ್ಲಿ ಮಿಥುನ್‌ ರೈ ಪ್ರಚಾರ, ಮತಯಾಚನೆ

09:16 PM Apr 08, 2019 | Team Udayavani |

ಉಳ್ಳಾಲ: ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರು ಉಳ್ಳಾಲ ಭಾಗದಲ್ಲಿ ರವಿವಾರ ಅಬ್ಬರದ ಪ್ರಚಾರ ನಡೆಸಿದ್ದು, ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಸಾಥ್‌ ನೀಡಿದರು.

Advertisement

ಬೆಳಗ್ಗೆ ಅಸೈಗೋಳಿಯಲ್ಲಿ ಹಿರಿಯರಾದ ರಘುರಾಮ ಕಾಜವ ಅವರ ಆಶೀರ್ವಾದ ಪಡೆದು ಕ್ಷೇತ್ರ ಸಂಚಾರ ಮಾಡಿದರು. ಉಳ್ಳಾಲದ ಉಳಿಯ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ, ಬೋಳಿಯಾರ್‌ ಗ್ರಾಮದ ಜಾರದಗುಡ್ಡೆ ದರ್ಗಾ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ, ಕೊಣಾಜೆ, ಬೋಳಿಯಾರ್‌, ಪಾವೂರು, ಹರೇಕಳ ಮುನ್ನೂರು, ಕೊಣಾಜೆ, ಮಂಜನಾಡಿ, ಕಿನ್ಯಾ, ತಲಪಾಡಿ, ಉಳ್ಳಾಲದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು.

ಸಚಿವರಾದ ಯು.ಟಿ. ಖಾದರ್‌, ಶಾಸಕ ಎನ್‌.ಎ. ಹ್ಯಾರಿಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾಕ ಉಪಾಧ್ಯಕ್ಷ ಯು. ಕಣಚೂರು ಮೋನು, ಕ್ಷೇತ್ರ ಉಪಾಧ್ಯಕ್ಷ ಸುರೇಶ್‌ ಭಟ್ನಗರ, ಮುಹಮ್ಮದ್‌ ಮುಸ್ತಾಫ‌ ಮಲಾರ್‌, ಪ್ರ. ಕಾರ್ಯದರ್ಶಿ ಅಬ್ದುಲ್‌ ರಹ್ಮಾನ್‌ ಕೋಡಿಜಾಲ್‌, ಇಕ್ಬಾಲ್‌ ಸಾಮಾಣಿಗೆ, ಶ್ರೀನಿವಾಸ ಶೆಟ್ಟಿ, ಪುಲ್ಲು, ಜಬ್ಟಾರ್‌ ಬೋಳಿಯಾರ್‌, ರಮೇಶ್‌ ಶೆಟ್ಟಿ, ಸಲೀಂ ಮೇಗಾ ಅಸೈಗೋಳಿ, ಮಹಾಬಲ ಹೆಗ್ಡೆ ದೆಬ್ಬೇಲಿ, ವಿನ್ಸೆಂಟ್‌ ಧರ್ಮನಗರ, ಝಕರಿಯಾ ಮಲಾರ್‌ , ಎನ್‌.ಎಸ್‌. ಕರೀಂ, ಟಿ.ಎಸ್‌. ಇಸ್ಮಾಯಿಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next