Advertisement

ಕೋಬ್ರಾ ಕಮಾಂಡೋ ಬಿಡುಗಡೆಗೆ ಷರತ್ತು ವಿಧಿಸಿ ಪತ್ರ ಬರೆದ ನಕ್ಸಲ್ ಸಂಘಟನೆ!

01:32 PM Apr 07, 2021 | Team Udayavani |

ನವದೆಹಲಿ:ಇತ್ತೀಚೆಗೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜತೆ ನಡೆದ ಗುಂಡಿನ ಕಾಳಗದ ಸಂದರ್ಭದಲ್ಲಿ ನಕ್ಸಲೀಯರಿಂದ ಅಪಹರಿಸಲ್ಪಟ್ಟ ಕೋಬ್ರಾ ಕಮಾಂಡೋ ಯೋಧನ ಬಿಡುಗಡೆಗೆ ಮಧ್ಯವರ್ತಿಗಳನ್ನು ಕಳುಹಿಸಿ ಎಂದು ನಕ್ಸಲರು ಷರತ್ತಿನ ಪತ್ರ ಬಿಡುಗಡೆ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ನಕ್ಸಲ್ ಸಂಘಟನೆ ಬರೆದಿದೆ ಎನ್ನಲಾದ ಪತ್ರದಲ್ಲಿ, ಅಪಹರಿಸಲ್ಪಟ್ಟ ಸಿಆರ್ ಪಿಎಫ್ ಕಮಾಂಡೋ ಬಿಡುಗಡೆಗೆ ಮಧ್ಯವರ್ತಿಯನ್ನು ಕಳುಹಿಸುವಂತೆ ತಿಳಿಸಿರುವುದಾಗಿ ವರದಿ ತಿಳಿಸಿದೆ.

ಸಿಪಿಐ(ಮಾವೋವಾದಿ) ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಎಸ್ ಝಡ್ ಸಿ) ಬರೆದಿರುವ ಎರಡು ಪುಟಗಳ ಪತ್ರದಲ್ಲಿ, ಅಪಹರಿಸಲ್ಪಟ್ಟ ಕೋಬ್ರಾ ಕಮಾಂಡೋ ನಮ್ಮ ವಶದಲ್ಲಿ ಸುರಕ್ಷಿತವಾಗಿದ್ದಾರೆ. ಮಧ್ಯಸ್ಥಿಕೆ ಮಾತುಕತೆ ನಂತರ ಕಮಾಂಡೋ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸುವುದಾಗಿ ತಿಳಿಸಿದೆ.

ಇತ್ತೀಚೆಗೆ ಬಿಜಾಪುರ್ ಸುಕ್ಮಾ ಗಡಿಭಾಗದಲ್ಲಿ ನಕ್ಸಲೀಯರ ಹೊಂಚು ದಾಳಿಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದರು. ಸುಮಾರು 31 ಯೋಧರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ 210ನೇ ಬೆಟಾಲಿಯನ್ ನ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ನಾಪತ್ತೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next