Advertisement

Missing Caseಸಾಂತೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ; ದೂರು ದಾಖಲು

11:46 PM Oct 06, 2023 | Team Udayavani |

ಪಡುಬಿದ್ರಿ: ಸಾಂತೂರು ಗ್ರಾಮದ ನಿವಾಸಿ ಸುರೇಶ್‌ ಮೂಲ್ಯ (51) ಅವರು ಕಾಂಜರಕಟ್ಟೆ ಕಾಮತ್‌ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅ. 5ರಂದು ಬೆಳಗ್ಗೆ ಮನೆ ಬಿಟ್ಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೋಧಿ ಮೈಬಣ್ಣ, ದುಂಡು ಮುಖ, 170 ಸೆ.ಮೀ. ಎತ್ತರ ಇರುವ ಇವರು ಸಾಮಾನ್ಯ ಮೈಕಟ್ಟು ಹೊಂದಿದ್ದಾರೆ. ಹಿಂದಿ, ಕನ್ನಡ ಹಾಗೂ ತುಳು ಮಾತನಾಡಬಲ್ಲ ಅವರು ಕೆಂಪು, ಕಾಫಿ, ಬಿಳಿ ಬಣ್ಣದ ಗೆರೆಗಳುಳ್ಳ ಟಿ ಶರ್ಟ್‌ ಮತ್ತು ನೇರಳೆ ಲುಂಗಿ ಧರಿಸಿದ್ದರು. ಇವರ ಬಗ್ಗೆ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ (08202555452)ಯನ್ನು ಸಂಪರ್ಕಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next