Advertisement

ಹುಣಸೂರು: ವಿಕಲಚೇತನ ವ್ಯಕ್ತಿ ನಾಪತ್ತೆ

11:45 AM Apr 11, 2023 | Team Udayavani |

ಹುಣಸೂರು : ಮನೆಯಿಂದ ಹೊರ ಹೋಗಿದ್ದ ಪುತ್ರ ಕಾಣೆಯಾಗಿದ್ದಾನೆಂದು ಚಿಕ್ಕಬೀಚನಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಎಂಬವರು ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿಯ ಮನೆಯಿಂದ ಮಾ.25 ರ ಬೆಳಗ್ಗೆ ವಿಕಲಚೇತನ ಪುತ್ರ ಶಿವಣ್ಣ ಮನೆಯಲ್ಲಿ ಬಿಳಿಕೆರೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾತ ಈವರೆಗೂ ವಾಪಸ್ ಮರಳಿಲ್ಲ, ಪುತ್ರನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಚಹರೆ ಇಂತಿವೆ:

ಸಾದಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಬಣ್ಣ, ಎಡಗೈ ಮತ್ತು ಎಡಕಾಲು ವಿಕಲಚೇತನನಾಗಿದ್ದು, ಮನೆಯಿಂದ ಹೊರಗೆ ಹೋಗುವಾಗ ಹಳದಿ ಬಣ್ಣದ ಷರ್ಟ್, ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದು, ಮಾಹಿತಿ ಇದ್ದವರು (9480805057)ಗೆ ಮಾಹಿತಿ ನೀಡುವಂತೆ ಬಿಳಿಕೆರೆ ಇನ್ಸ್ಪೆಕ್ಟರ್‌ ಚಿಕ್ಕಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next