Advertisement

ಕುಷ್ಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿದಾತ ಕಾಣೆ; ದೂರು ದಾಖಲು

03:28 PM Feb 16, 2023 | Team Udayavani |

ಕುಷ್ಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೋದಾತ ಮರಳಿ‌ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಆತಂಕಗೊಂಡು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದಾರೆ.

Advertisement

ತಾಲೂಕಿನ ಚಳಗೇರಾ ಗ್ರಾಮದ 27 ವರ್ಷದ ಯುವಕ ಸುರೇಶ ಚಂದಪ್ಪ ಜಾಲಿಗಿಡ ನಾಪತ್ತೆಯಗಿರುವ ಯುವಕ.

ಈತ ಕಳೆದ ಜ.30 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿದ್ದು, ಬಳಿಕ ಪೆ.1 ರಂದು ಹೊಸ ಪೇಟೆಯಲ್ಲಿ ಇರುವುದಾಗಿ ತಮ್ಮ ಕುಟುಂಬದವರಿಗೆ ಫೋನ್ ಮೂಲಕ ತಿಳಿಸಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ 10 ದಿನಗಳಾದರೂ ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬದವರು ಕಾಣೆಯಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದವನ ಚಹರೆ ಇಂತಿವೆ: ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಅಂಗಿ, ಬಿಳಿ ಬಣ್ಣದ ಲುಂಗಿ ಧರಿಸಿದ್ದ. ಕೋಲು ಮುಖ, ಗಿಡ ಮೂಗಿನ ಮುಖ ಹೊಂದಿರುವ ಈತ 5 ಅಡಿ 4 ಇಂಚು ಎತ್ತರದವಿದ್ದಾನೆ. ಈತ ಕನ್ನಡ ಭಾಷೆ ಮಾತನಾಡುತ್ತಾನೆ ಎಂದು ತಂದೆ ದೇವಪ್ಪ ಜಾಲಿಗಿಡ ದೂರಿನಲ್ಲಿ ವಿವರಿಸಿದ್ದಾರೆ. ಕಾಣೆಯಾಗಿರುವ ಬಗ್ಗೆ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next