Advertisement

Missing Case; ಶೃಂಗೇರಿಯಲ್ಲಿ ನಾಪತ್ತೆಯಾಗಿದ್ದ ಆಂಧ್ರದ ಜ್ಯೋತಿಷಿ ಉಡುಪಿಯಲ್ಲಿ ಪತ್ತೆ

07:24 PM Aug 07, 2024 | Team Udayavani |

ಶೃಂಗೇರಿ: ಶ್ರೀಮಠದಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿ ನಂತರ ನಾಪತ್ತೆಯಾಗಿದ್ದ ಆಂಧ್ರ ಮೂಲದ ಜ್ಯೋತಿಷಿ ಶಿವಕುಮಾರ ಶರ್ಮ ಸೋಮವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ.

Advertisement

ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ಶಿವಕುಮಾರ ಶರ್ಮ ಶ್ರೀ ಶಾರದಾ ಪೀಠದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಕಳೆದ ವಾರ ಸನ್ಮಾನ ಸ್ವೀಕರಿಸಿ ಮರು ದಿನ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು.

ವಿಶೇಷ ತಂಡ ರಚನೆ
ಜ್ಯೋತಿಷಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೋಲೀಸರು ಕಾಣೆಯಾದ ದಿನದಿಂದ ಜ್ಯೋತಿಷಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇದರಿಂದ ಪೋಲೀಸರಿಗೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನಂತರ ಮೊಬೈಲ್ ಆನ್ ಆಗಿದ್ದ ವೇಳೆ ಸಂಪರ್ಕಿಸಿದಾಗ ಉಡುಪಿಯಲ್ಲಿರುವುದು ಗೊತ್ತಾಗಿದೆ ಆ ಬಳಿಕ ಅವರನ್ನು ಸಂಪರ್ಕಿಸಿ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next