Advertisement

Missing Case: ಅರಣ್ಯದಲ್ಲಿ 9 ಕಿ.ಮೀ. ದೂರು ಹುಡುಕಾಟ

11:46 PM Sep 22, 2023 | Team Udayavani |

ಸಿದ್ದಾಪುರ:ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ (28) ಅವರು ಮನೆಯಿಂದ ನಾಪತ್ತೆಯಾಗಿ 7 ದಿನಗಳು ಕಳೆದಿವೆ. ಅವರ ಹುಡುಕಾಟದ ಕಾರ್ಯ ಶುಕ್ರವಾರವೂ ಮುಂದುವರಿದಿದೆ.

Advertisement

ಪಶ್ಚಿಮ ಘಟ್ಟದ ತಪ್ಪಲ್ಲಿಗೆ ಹೊಂದಿಕೊಂಡಿರುವ ಮತ್ತು ದಟ್ಟ ಅರಣ್ಯಗಳಿಂದ ಆವೃತವಾದ ತೊಂಬಟ್ಟು ಮತ್ತು ಇರ್ಕಿಗದ್ದೆ ಪರಿಸರಲ್ಲಿ ಸಾಕಷ್ಟು ಕಾಡು ಪ್ರಾಣಿಗಳು, ದೊಡ್ಡ ದೊಡ್ಡ ಹೆಬ್ಟಾವುಗಳು, ಹುಲಿ-ಚಿರತೆಗಳು ಸಾಕಷ್ಟು ಇವೆ. ಇತಂಹ ದಟ್ಟವಾದ ಕಾಡಿನಲ್ಲಿ ಮರಗಳ ಮಧ್ಯೆ ಎತ್ತರ ಎತ್ತರವಾದ ಕುರುಚಲು ಗಿಡಗಳು ಇವೆ. ಈ ಗಿಡಗಳ ಮಧ್ಯೆ ಶೋಧ ಕಾರ್ಯ ಕಷ್ಟವಾದ ಕೆಲಸವಾಗಿದೆ. ದಟ್ಟವಾದ ಅರಣ್ಯದ ಒಳಗೆ ಸುಮಾರು 9 ಕಿ.ಮೀ ದೂರದವರೆಗೆ ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಇಂದು ಘಾಟಿಯಲ್ಲಿ
ಯುವಕನ ಮನೆಯಿಂದ 9 ಕಿ.ಮೀ. ದೂರದ ಪಶ್ಚಿಮ ಘಟ್ಟದ ತಪ್ಪಲ್ಲಿನ ತನಕ ಹುಡುಕಾಟ ನಡೆಸಿದ್ದು, ಶನಿವಾರ ಘಾಟಿ ಪರಿಸರದಲ್ಲಿ ಹುಡುಕಾಟ ನಡೆಯಲಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next