Advertisement

2 ಬಾರಿ ಸಿಎಂ ಅವಕಾಶ ಕೈತಪ್ಪಿದೆ,ಅದೃಷ್ಟವಿದ್ದರೆ ನಾನೇ ಸಿಎಂ: ಪರಮೇಶ್ವರ್‌

10:53 PM Dec 18, 2022 | Team Udayavani |

ಮಧುಗಿರಿ: ನಾನೊಬ್ಬ ವಿದ್ಯಾವಂತ ಕುಟುಂಬ ದಿಂದ ಬಂದವನು ಹಾಗೂ 30 ವರ್ಷಗಳಿಂದ ಜನಸೇವೆ ಯಲ್ಲಿದ್ದೇನೆ. 2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು. ಜಾತಿ ಆಧಾರದಲ್ಲಿ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್‌ ಹೇಳಿದರು.

Advertisement

ತಾಲೂಕಿನ ಪುರವರ ಹೋಬಳಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಈ ಭಾಗದ ಜನ ನನ್ನ ರಾಜಕೀಯದಲ್ಲಿ ಜತೆ ಯಾಗಿದ್ದಾರೆ. ನನಗೆ ರಾಜಕೀಯವೆಂದರೆ ಜನಸೇವೆಯೇ ಹೊರತು ಕೇವಲ ಸಿಎಂ ಆಗುವುದಲ್ಲ. ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಗೆ ವಿನೋಬಾ ಭಾವೆ ಬಂದಿ ದ್ದರು. ತಂದೆ ಗಾಂಧೀಜಿಯವರನ್ನು 2 ಬಾರಿ ಭೇಟಿಯಾಗಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next