Advertisement

ನಾಪತ್ತೆಯಾಗಿದ್ದ ಆನೆ ದಂತ ಪತ್ತೆ! ;ಹಲವು ಅನುಮಾಗನಳು

12:30 AM Feb 27, 2019 | |

ಶಿವಮೊಗ್ಗ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕಾಣೆಯಾಗಿದ್ದ ಆನೆ ದಂತವು ಅದೇ ಕಟ್ಟಡದಲ್ಲಿ ಪತ್ತೆಯಾಗುವ ಮೂಲಕ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Advertisement

ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಪರ ಪೊಲೀಸ್‌ ವರಿಷ್ಠಾ ಧಿಕಾರಿ ಮುತ್ತುರಾಜ್‌, ನೂತನ ಎಸ್‌ಪಿ ಎಂ. ಅಶ್ವಿ‌ನಿ ಅವರು ಅಧಿಕಾರ ವಹಿಸಿಕೊಂಡ ನಂತರ ಕಚೇರಿ ಮೇಲಿದ್ದ ದಾಸ್ತಾನು ಕೊಠಯಲ್ಲಿನ 8-10 ವರ್ಷಗಳ ಪೇಪರ್‌, ರಿಜಿಸ್ಟರ್‌ ಇರುವ ಕೊಠಡಿಯನ್ನು ಸ್ವತ್ಛ ಮಾಡಲು ಸೂಚಿಸಿದ್ದರು. ಅದರಂತೆ ಸೋಮವಾರ ಸ್ವತ್ಛತಾ ಕಾರ್ಯ ಆರಂಭವಾಗಿತ್ತು. ಈ ವೇಳೆ ಗೌರಮ್ಮ ಎಂಬ ಸಿಬ್ಬಂದಿಗೆ ಪೇಪರ್‌ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಆನೆ ದಂತ ಪತ್ತೆಯಾಗಿದೆ. ಈ ಮಾಹಿತಿ ತಿಳಿಸಿದ ಕೂಡಲೇ ಅದನ್ನು ತಕ್ಷಣ ವಶಕ್ಕೆ ಪಡೆಯಲಾಗಿದೆ. ಈ ವಿಷಯ ವನ್ನು ಸಿಐಡಿ ಅ ಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. 2014ರ ನಂತರ ಆನೆ ದಂತ ಕಳುವಾಗಿದೆ ಎಂದು ಹಿಂದಿನ ಎಸ್‌ಪಿ ಅಭಿನವ್‌ ಖರೆ ಅವರು ತನಿಖೆಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆ ಮಾಡಿ ಕಳೆದ ವರ್ಷ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಮುಂದುವರಿದು ಜನವರಿ ತಿಂಗಳಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

ಭಾರೀ ಗಾತ್ರದ ಆನೆದಂತಗಳು ಎಸ್ಪಿ ಕಚೇರಿಗೆ ಮುಕುಟ ಪ್ರಾಯದಂತೆ ಇದ್ದವು. ಅಧಿಕಾರ ಹಸ್ತಾಂತರ ಸಂದರ್ಭಗಳಲ್ಲೆಲ್ಲ ಅ ಧಿಕಾರಿಗಳು ದಂತಗಳ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಆಕರ್ಷಕವಾಗಿದ್ದ ದಂತಗಳು ಮುರುಗನ್‌ ಅವರು ಅಧಿ ಕಾರ ಸ್ವೀಕರಿಸಿದಾಗಲೂ ಇದ್ದವು. ಆದರೆ, ಆನಂತರದ ಐದಾರು ವರ್ಷಗಳಲ್ಲಿ ದಂತಗಳು ನಾಪತ್ತೆಯಾದವು.ಟೇಬಲ್‌ ಮೇಲೆ ಅಲಂಕೃತ ಮರದ ಪೀಠದ ಮೇಲೆ ಸುಂದರವಾಗಿ ಇಡಲಾಗಿದ್ದ ದಂತವನ್ನು ಯಾರು ಅಪಹರಿಸಿದರು ಎಂಬುದು ನಿಗೂಢವಾಗಿದೆ. ಇದರ ಆಧಾರದ ಮೇಲೆ ಹುಡುಕಿದಾಗ ದಂತ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ 2018ನೇ ಮೇ 22ರಂದು ಎಸ್‌ಪಿ ಕಚೇರಿಯ ರಹಸ್ಯ ಶಾಖೆಯ ಶೀಘ್ರ ಲಿಪಿಗಾರ ಎ.ಬಿ.ಶ್ರೀನಾಥ್‌ ಅವರು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಕಮಲ್‌ ಪಂತ್‌ ಅಗಮಿಸಿ ತನಿಖೆಗೆ ಚುರುಕು ನೀಡುವ ಪ್ರಯತ್ನ ನಡೆಸಿದ್ದರು. ಅದರ ಭಾಗವಾಗಿ ಕರ್ತವ್ಯ ಲೋಪದ ಆಧಾರದ ಮೇಲೆ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿತ್ತು. ಇನ್ಸ್‌ ಪೆಕ್ಟರ್‌ಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ, ತನಿ ಖೆಯಲ್ಲಿ ಯಾವುದೇಪ್ರಗತಿಯಾಗಿರಲಿಲ್ಲ.
ನಂತರ ಇದನ್ನು ಜನವರಿ 2019ರಲ್ಲಿ ಸಿಐಡಿ ತನಿಖೆಗೆವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next