Advertisement

Theerthahalli: ಮಿಸ್ ಫೈರಿಂಗ್; ದಾಖಲಾಯ್ತು ಸುಮೋಟೋ ಕೇಸ್ !

10:26 AM Aug 06, 2023 | Kavyashree |

ತೀರ್ಥಹಳ್ಳಿ : ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ದಾಸನಗದ್ದೆ ಸಮೀಪದ ಹಿರೇಗದ್ದೆಯಲ್ಲಿ ಆ.4ರ ಶುಕ್ರವಾರ ತಡ ರಾತ್ರಿ ಮಿಸ್ ಫೈರಿಂಗ್ ಆಗಿ ವ್ಯಕ್ತಿಯೋರ್ವನಿಗೆ ಗಾಯವಾದ ಪ್ರಕರಣದಲ್ಲಿಗ ತೀರ್ಥಹಳ್ಳಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.

Advertisement

ಅಕ್ರಮ ನಾಡ ಬಂದೂಕು ಹೊಂದಿದ್ದು, ಮತ್ತು ಕಾಡು ಪ್ರಾಣಿಯನ್ನು ಹಿಡಿಯಲು ಹೋಗಿದ್ದಕ್ಕೆ ಸಹೋದರರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಹೋದರರಿಬ್ಬರು ನಾಡ ಬಂದೂಕುಗಳನ್ನ ಹಿಡಿದು ಶಿಕಾರಿಗೆ ಹೋದಾಗ ತಮ್ಮನ ಬಂದೂಕಿನಿಂದ ಹಾರಿದ ಗುಂಡು ಅಣ್ಣನ ಮೊಣಕಾಲನ್ನು ಸೀಳಿದೆ.

ಕಾಡು ಹಂದಿ ಬೇಟೆಯಾಡಲು ರಾಕೇಶ್ ಮತ್ತು ರಾಜೇಶ್ ಶುಕ್ರವಾರ ರಾತ್ರಿ ಕಾಡು ಹಂದಿ ಹಿಡಿಯಲು ಶಿಕಾರಿಗೆ ಹೋಗಿದ್ದಾರೆ. ಈ ವೇಳೆ ಅಣ್ಣ ರಾಕೇಶ್ (30)  ಕಾಡು ಹಂದಿ ಕಂಡಿದ್ದರಿಂದ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ಆದರೆ ಗುಂಡು ಪ್ರಾಣಿಗೆ ತಗುಲದೆ ಇದ್ದಾಗ ರಾಕೇಶ್ ತಮ್ಮ ರಾಜೇಶ್ ತನ್ನ ಬಂದೂಕಿನಿಂದ ಹಾರಿಸಿದ ಗುಂಡು ರಾಕೇಶ್ ಮೊಣಕಾಲು ಗಾಯಗೊಳಿಸಿದೆ. ತಕ್ಷಣವೇ ಜೆ.ಸಿ ಆಸ್ಪತ್ರೆಗೆ ದಾಖಲಿಸಿ ಮಣಿಪಾಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ.

ತೀರ್ಥಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next