Advertisement

ಸಚಿವರ ಸಮರ : ಡಾ.ಸುಧಾಕರ್ ಹೇಳಿಕೆಗೆ ಡಾ.ನಾರಾಯಣ ಗೌಡ ಗರಂ

06:59 PM Dec 15, 2021 | Team Udayavani |

ಬೆಳಗಾವಿ : ವಿಧಾನ ಪರಿಷತ್ ಫಲಿತಾಂಶ ಪ್ರಕಟವಾಗಿದ್ದು, ಸಚಿವದ್ವಯರ ನಡುವೆ ಮಾತಿನ ಸಮರಕ್ಕೆ ಕಾರಣ ವಾಗಿದೆ.

Advertisement

ಮಂಡ್ಯ ಮತಪ್ರಮಾಣ ಕಡಿಮೆಯಾಗಿರುವುದು ದುರದೃಷ್ಟಕರ, ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಸುಧಾಕರ್ ಹೇಳಿಕೆ ವಿಚಾರಕ್ಕೆ ಸಚಿವ ಡಾ. ನಾರಾಯಣ ಗೌಡ ಅವರು ಕಿಡಿ ಕಾರಿದ್ದಾರೆ.

ಸುಧಾಕರ್ ನಮ್ಮ ಲೀಡರ್ ಹಾ..? ಅವರು,ಅವರ ಕ್ಷೇತ್ರದ ಬಗ್ಗೆ ಮಾತನಾಡಲಿ. ನಾವು ನಮ್ಮ ಕ್ಷೇತ್ರದ ಬಗ್ಗೆ ಹೇಳುತ್ತೇವೆ. ಸಚಿವರಿಗೇನು ಗೊತ್ತು ಮಂಡ್ಯದ ಬಗ್ಗೆ.ನನಗೆ ಗೊತ್ತು ನಾನು ಮಾತನಾಡುತ್ತೇನೆ. ಅವರ ಕೆಲಸ ಅವರು ಮಾಡಲಿ ಎಂದು ನಾರಾಯಣ್ ಗೌಡ ಗರಂ ಆಗಿದ್ದಾರೆ.

ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ, ಪಕ್ಷದ ಬೆಳೆಸುವ ಜವಾಬ್ದಾರಿ ಇದೆ. ನಾನು ಜವಾಬ್ದಾರಿಯಲ್ಲೇ ಇದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next