Advertisement

ಸಚಿವರ ಭರವಸೆ: ಮುಷ್ಕರ ಕೈಬಿಟ್ಟ ಗ್ರಾ. ಪಂ. ನೌಕರರು

02:27 PM Oct 11, 2024 | Team Udayavani |

ಮಣಿಪಾಲ: ಗ್ರಾ. ಪಂ.ಗಳ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಮತ್ತು ಪಂಚ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಮುಷ್ಕರ ನಡೆಸಿದ್ದು, ಬೆಂಗಳೂರಿನಲ್ಲಿ ರಾಜ್ಯ ಮುಖಂಡರು ಮತ್ತು ಸಚಿವರ ಮಾತುಕತೆ ಅನಂತರ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ.

Advertisement

ಜಿಲ್ಲೆಯ ಎಲ್ಲ ಭಾಗದಿಂದ ಪಿಡಿಒ, ಎಸ್‌ಡಿಎ, ಕಾರ್ಯದರ್ಶಿ ಸಹಿತ ಗ್ರಾ. ಪಂ. ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗ್ರಾ. ಪಂ. ಅಧಿಕಾರಿ, ನೌಕರರ ಮುಖಂಡರ ಜತೆಗೆ ಮಧ್ಯಾಹ್ನ ಮಾತುಕತೆ ನಡೆಸಿ ಜ್ಯೇಷ್ಠತಾ ಪಟ್ಟಿ ಪ್ರಕ್ರಿಯೆ, ಭಡ್ತಿ, ವೇತನ ಪರಿಷ್ಕರಣೆ ಸಹಿತ ಮೊದಲಾದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿದ್ದು, ಹಂತಹಂತವಾಗಿ ಸಮಸ್ಯೆಗಳ ಪರಿಹರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಸ್ಥಗಿತಗೊಳಿಸಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next