Advertisement

ನಲಿ-ಕಲಿ ಯೋಜನೆ ಮರು ಪರಾಮರ್ಶೆಗೆ ಸಚಿವ ಸುರೇಶ್‌ ಕುಮಾರ್‌ ನಿರ್ದೇಶನ

08:36 AM May 14, 2020 | Sriram |

ಬೆಂಗಳೂರು: ನಲಿ-ಕಲಿ ಯೋಜನೆ ಕುರಿತು ಮರುಪರಾಮರ್ಶೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯಕ್ರಮ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ರಾಜ್ಯದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಲಿ-ಕಲಿ ಮತ್ತು ಕಲಿ-ನಲಿ ತರಗತಿಗಳು ಅತ್ಯಂತ ವಿಶಿಷ್ಟವಾಗಿದೆ. ಈ ತರಗತಿಗಳ ಮೂಲಕ ಮಕ್ಕಳಿಗೆ ಕಲಿಸುತ್ತಿರುವ ರೀತಿ ಅಪಾರ ಮನ್ನಣೆ ಗಳಿಸಿದೆ. ಒಂದು ರೀತಿಯಿಂದ ನಾವು ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪ್‌ಲ್ಯಾಗ್‌ ಶಿಪ್‌ ಕಾರ್ಯಕ್ರಮಗಳೆಂದರೆ ತಪ್ಪಾಗಲಾರದು ಎಂದರು.

ಆದರೆ, ಕೋವಿಡ್-19 ನಂತರದ ದಿನಗಳಲ್ಲಿ ಈ ನಲಿ-ಕಲಿ ಮತ್ತು ಕಲಿ-ನಲಿ ತರಗತಿಗಳ ಬಗ್ಗೆ ನಾವು ಮರು ಚಿಂತನೆ ಮಾಡಬೇಕಿದೆ. ಸಾಮಾಜಿಕ ಅಂತರ ಇಟ್ಟುಕೊಂಡು ಈ ಕಾರ್ಯಕ್ರಮದ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ಕುರಿತು ಇಲಾಖೆ ಸೂಕ್ತ ಪಠ್ಯ ರೂಪಿಸಲು ಅಗತ್ಯ ಕ್ರಮದ ಬಗ್ಗೆ ಹೆಜ್ಜೆ ಇಡಬೇಕು ಎಂದು ಸಚಿವ ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next