Advertisement

ಕುರ್ಚಿ ತರಲು ತಡವಾಗಿದ್ದಕ್ಕೆ ಕಾರ್ಯಕರ್ತನ ಮೇಲೆ ಕಲ್ಲೆಸೆದ ಸಚಿವ: ವಿಡಿಯೋ ವೈರಲ್‌…

07:48 PM Jan 24, 2023 | Team Udayavani |

ತಮಿಳುನಾಡು: ಕುರ್ಚಿ ತರಲು ತಡ ಮಾಡಿದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ಸಚಿವನೊಬ್ಬ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದ ಘಟನೆ ತಮಿಳುನಾಡಿನ ತಿರುವಳ್ಳೂರ್‌ನಲ್ಲಿ ವರದಿಯಾಗಿದೆ.

Advertisement

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಜ.25ರಂದು ಕಾರ್ಯಕ್ರಮವೊಂದಕ್ಕೆ ಆಗಮಿಸುವರಿದ್ದರು. ಈ ಸಂಬಂಧ ತಮಿಳುನಾಡು ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್‌.ಎಂ.ನಾಸರ್‌ ಸಿದ್ಧತೆ ಪರಿಶೀಲಿಸಲು ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕೂರಲು ಕುರ್ಚಿ ತರಲು ತಡ ಮಾಡಿದ ಕಾರಣ ಸಿಟ್ಟೆಗೆದ್ದ ಸಚಿವ, ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಕಲ್ಲು ಎಸೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಾಲತಾಣಗಳಲ್ಲಿಯೂ ಅವರ ವರ್ತನೆಯನ್ನು ಕಟುವಾಗಿ ಟೀಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next