Advertisement

ಪ್ರವರ್ಗ 2ಎನಲ್ಲಿ ಒಳಮೀಸಲಾತಿ?

06:25 AM Aug 06, 2018 | |

ಮೈಸೂರು: ರಾಜ್ಯದಲ್ಲಿನ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಸದ್ದಿಲ್ಲದೇ ಪ್ರವರ್ಗ 2 ಎನಲ್ಲಿ ಒಳಮೀಸಲಾತಿ ಜಾರಿಗೆ
ತರಲು ಹೊರಟಿದೆ. ಈ ಬಗ್ಗೆ ಸ್ವತಃ ಸಚಿವ ಸಾ.ರಾ.ಮಹೇಶ್‌ ಅವರೇ ಸುಳಿವು ನೀಡಿದ್ದಾರೆ.

Advertisement

ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮು ದಾಯಗಳ ಅನುಕೂಲಕ್ಕಾಗಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿಗೆ ಪ್ರವರ್ಗ 2 ಎನಲ್ಲಿ ಒಳಮೀಸಲಾತಿ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ಇಂದಿಗೂ ಬಹುತೇಕ ಸಮುದಾಯಗಳು ತೀರಾ ಹಿಂದುಳಿದಿದ್ದು,ಇವು ಶೈಕ್ಷಣಿಕ ಮತ್ತು ಸಾಮಾಜಿಕ
ನ್ಯಾಯಕ್ಕಾಗಿ ಹೋರಾಟ ಮಾಡುವುದು ಅತ್ಯಂತ ಕಠಿಣವಾಗಿದೆ. ಹೀಗಾಗಿ ಒಳ ಮೀಸಲಾತಿ ನೀಡಲು ಸಿಎಂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. 2007ರಲ್ಲೇ ದೇವೇಗೌಡರು ಈ ಬಗ್ಗೆ ಆಲೋಚನೆ ಮಾಡಿದ್ದರು.

ಕುರುಬರು ಹಾಗೂ ಈಡಿಗರಷ್ಟೇ ಅಲ್ಲದೆ ಸಣ್ಣಪುಟ್ಟ ಸಮುದಾಯಕ್ಕೂ ಪ್ರಯೋಜನ ಕಲ್ಪಿಸುವುದು ಅವರ ಚಿಂತನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next