Advertisement

ಸಚಿವರು ರಾಜೀನಾಮೆ ನೀಡಲಿ: ಬೋಳಿಯಾರ್ 

09:32 AM Jan 05, 2018 | Team Udayavani |

ಉಳ್ಳಾಲ: ರಾಜ್ಯಾದ್ಯಂತ ಅಮಾಯಕರ ಹತ್ಯೆಯಾಗುತ್ತಿದ್ದು, ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ, ಆಹಾರ ಸಚಿವರು ಸೇರಿದಂತೆ ಸುರತ್ಕಲ್‌, ಮೂಡಬಿದಿರೆ ಶಾಸಕರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಆಗ್ರಹಿಸಿದರು. ಸುರತ್ಕಲ್‌ನಲ್ಲಿ ಹಿಂದೂ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಗುರುವಾರ ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಮಾತನಾಡಿದರು.

Advertisement

ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್‌ ಕೆ.ಆರ್‌., ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್‌, ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಅಶ್ರಫ್‌ ಹರೇಕಳ, ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಆಳ್ವ, ಕೋಟೆಕಾರು ಪಟ್ಟಣ ಪಂ. ಅಧ್ಯಕ್ಷ ಉದಯ ಶೆಟ್ಟಿ ಸೊಳ್ಳೆಂಜೀರು, ಮಹಾಲಕ್ಷ್ಮೀ, ದಿವ್ಯಾ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಭಾರತಿ ಗಟ್ಟಿ, ಹರಿಯಪ್ಪ ಸಾಲ್ಯಾನ್‌, ಸುರೇಂದ್ರ ಶೆಟ್ಟಿ, ಜೀವನ್‌ ಕುಮಾರ್‌ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಪ್ರಶಾಂತ್‌ ಕಾಪಿಕಾಡ್‌, ಮಹಮದ್‌ ಅಜ್ಗರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next