Advertisement

ಅಯೋಧ್ಯೆ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್‌ ಆಗ್ರಹ

10:14 AM Dec 26, 2018 | Harsha Rao |

ಲಕ್ನೋ: ರಾಮಜನ್ಮಭೂಮಿ ವಿವಾದವನ್ನು ತ್ವರಿತಗತಿ ಯಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಬೇಕೆಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಜ. 4ರಂದು ಅಯೋಧ್ಯೆ ವಿವಾದ ವಿಚಾರಣೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಸಚಿವರ ಈ ಆಗ್ರಹ ಮಹತ್ವ ಪಡೆದುಕೊಂಡಿದೆ. 

Advertisement

15ನೇ ಅಖೀಲ ಭಾರತೀಯ ಅಧಿವಕ್ತಾ ಪರಿಷತ್‌ನ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “”ಶಬರಿಮಲೆ ವಿಚಾರದಲ್ಲಿ ನಡೆದ ಕ್ಷಿಪ್ರಗತಿಯ ವಿಚಾರಣೆ ಮಾದರಿಯಲ್ಲೇ, ಅಯೋಧ್ಯೆ ವಿವಾದದ ವಿಚಾರಣೆಯನ್ನೂ ನಡೆಸಿ, ಆದಷ್ಟು ಬೇಗ ತೀರ್ಪು ಪ್ರಕಟಿಸಬೇಕೆಂದು ನನ್ನ ವ್ಯಾಪ್ತಿಯೊಳಗೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ” ಎಂದರು.  

ವಿವಾದಾತ್ಮಕ ಹೇಳಿಕೆ ನೀಡಬೇಡಿ: ಇದೇ ವೇಳೆ, ಜ. 4ರಂದು ವಿವಾದ ಸುಪ್ರೀಂನಲ್ಲಿ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ, ವಿವಾದದ ಬಗ್ಗೆ ಯಾರೊಬ್ಬರೂ ವಿವಾದಾತ್ಮಕ ಹೇಳಿಕೆ ನೀಡಬಾರದೆಂದು ಬಾಬ್ರಿ ಮಸೀದಿ ಆ್ಯಕ್ಷನ್‌ ಕಮಿಟಿ (ಬಿಎಂಎಸಿ) ದೇಶದ ಮುಸ್ಲಿಮರಿಗೆ ಕರೆ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next