Advertisement

ಜಾರಕಿಹೊಳಿ ಪಕ್ಷಕ್ಕೆ ತೊಂದರೆ ಕೊಡುವವರಲ್ಲ :ದಿನೇಶ್‌ ಗುಂಡೂರಾವ್‌

12:11 PM Sep 06, 2018 | Team Udayavani |

ಹೊಸದಿಲ್ಲಿ: ಬೆಳಗಾವಿ ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರ ನಡುವಿನ ಕಲಹ ತಾರಕಕ್ಕೇರಿರುವ ವೇಳೆಯಲ್ಲಿ  ದೊಡ್ಡ ಪಕ್ಷಗಳಲ್ಲಿ  ಇಂತಹ ಗೊಂದಲಗಳು ಸಾಮಾನ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಹೇಳಿಕೆ ನೀಡಿದ್ದಾರೆ. 

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಅವರು ರಮೇಶ್‌ ಜಾರಕಿಹೊಳಿ ಅವರು ಹಿರಿಯ ನಾಯಕ, ನನ್ನೊಂದಿಗೆ ಅವರು ಶಾಸಕರಾಗಿ ಆಯ್ಕೆಯಾಗಿ ಬಂದವರು. 5 ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಅವರು ಪಕ್ಷಕ್ಕೆ  ತೊಂದರೆ ಕೊಡುವ ನಾಯಕರಲ್ಲ ಎಂದರು. 

ಇದೇ ವೇಳೆ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ದಿನೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next