Advertisement

ಜಾರಕಿಹೊಳಿ v/s ಡಿಕೆಶಿ: ! ಸ್ವಘೋಷಿತ ಪ್ರಭಾವಿ ನಾಯಕರ ಕುತಂತ್ರ

02:16 PM Nov 30, 2018 | Sharanya Alva |

ಬೆಳಗಾವಿ/ಬೆಂಗಳೂರು: ನಾನು ಮುಂಬೈಗೆ ಹೋಗಿದ್ದೇನೆ ಎಂಬುದು ಸುಳ್ಳು ಸುದ್ದಿ. ಕಳೆದ 2 ದಿನಗಳಿಂದ ಮನೆಯಲ್ಲೇ ಇದ್ದೇನೆ. ಆದರೆ ನನ್ನ ಹೆಸರು ಕೆಡಿಸಲು ಕಾಂಗ್ರೆಸ್ ನ ಪ್ರಭಾವಿ ಮುಖಂಡರೊಬ್ಬರು ಕುತಂತ್ರ ನಡೆಸುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

Advertisement

ಜಾರಕಿಹೊಳಿ ಅವರು ಮುಂಬೈಗೆ ಹೋಗಲಿದ್ದಾರೆ ಎಂಬ ಊಹಾಪೋಹ ಕುರಿತಂತೆ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಂಬೈಗೆ ಹೋಗಿಲ್ಲ. ಸ್ವಘೋಷಿತ ಪ್ರಭಾವಿ ನಾಯಕರ ಕುತಂತ್ರದಿಂದ ಇಂತಹ ಸುದ್ದಿ ಹಬ್ಬುತ್ತಿದೆ ಎಂದು ಆರೋಪಿಸುವ ಮೂಲಕ ಇಬ್ಬರು ನಾಯಕರ ನಡುವಿನ ಅಸಮಾಧಾನ ಮತ್ತೊಮ್ಮೆ ಹೊರಬಿದ್ದಿದೆ.

ರಮೇಶ್ ನನ್ನ ಪರ್ಸನಲ್ ಫ್ರೆಂಡ್..ಪಾಪ ಅವರ ಇಮೇಜ್ ಹಾಳು ಮಾಡಬೇಡಿ:ಡಿಕೆಶಿ

ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ನೋಡ್ರಿ ನನ್ನ ಮೇಲೆ ಯಾರು ಬೇಕಾದ್ರೂ ಪ್ರಹಾರ ಮಾಡಲಿ. ರಮೇಶ್ ನನ್ನ ಪರ್ಸನಲ್ ಫ್ರೆಂಡ್. ನೀವು ಮಾಧ್ಯಮದವರು ಸುಮ್ಮನೆ ಸೃಷ್ಟಿ ಮಾಡುತ್ತಿದ್ದೀರಿ. ಹೀ ಇಸ್ ಮೈ ಪರ್ಸನಲ್ ಫ್ರೆಂಡ್, ಅವರು ಯೂತ್ ಕಾಂಗ್ರೆಸ್ ನಿಂದ ಬೆಳೆದವರು, ಪಾಪ ಹಾಗೆಲ್ಲ ಮಾಡೋರಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next