Advertisement

CM ಯೋಗಿ ಆದಿತ್ಯನಾಥ್‌ ಕ್ರಮ ಶ್ಲಾಘಿಸಿದ ಸಚಿವ ರಾಜಣ್ಣ

08:40 PM Mar 09, 2024 | Team Udayavani |

ತುಮಕೂರು(ಗ್ರಾಮಾಂತರ): ನಮ್ಮಲ್ಲೂ ಉತ್ತರ ಪ್ರದೇಶ ಮಾದರಿ ಕಾನೂನು ತರಲಿ. ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದರೆ ಅವರನ್ನು ಗುಂಡಿಕ್ಕಿ ಕೊಲ್ಲಲಿ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾನೂನೇ ಇಲ್ಲ. ಆದರೂ ಸಮಾಜಘಾತುಕರ ಮನೆಗಳನ್ನು ಕೆಡವುತ್ತಾರೆ. ಈಗ ಭಯಬಿದ್ದು ಕಂಟ್ರೋಲ್‌ ಆಗಿಲ್ವಾ..? ಅದೇ ರೀತಿ ಮಾಡಲಿ.

ಅಭಿವೃದ್ಧಿಯಾಗಬೇಕು ಅಂದರೆ ಸಮಾಜದಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಮ್ಮದಿಗಾಗಿ ಇಂಥಹ ಕ್ರಮ ಅಗತ್ಯವಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸಿಎಂ ಯೋಗಿ ಆದಿತ್ಯನಾಥ್‌ ಕ್ರಮವನ್ನು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next