Advertisement
ಶಾಲಾ ಶಿಕ್ಷಕರ ವರ್ಗಾವಣೆ ತಡೆ ಹಿಡಿಯುವಂತೆ ಪುತ್ತೂರು ನಗರದ ಹಾರಾಡಿ ಶಾಲೆಯ ಗೃಹ ಸಚಿವ ದಿವಿತ್ ರೈ ಅವರು ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್ಗೆ ಮೊಬೈಲ್ ಸಂದೇಶ ಕಳುಹಿಸಿ, ಶಿಕ್ಷಕರ ವರ್ಗಾವಣೆ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಘಟನೆ ಕೆಲವು ತಿಂಗಳ ಹಿಂದೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.
ಅದೇ ಹಾರಾಡಿ ಶಾಲೆಯ ಹೇಮಂತದ ಸಂಭ್ರಮಕ್ಕೆ ಗುರುವಾರ ಆಗಮಿಸಿದ ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಘಟನೆಯನ್ನು ಮೆಲುಕು ಹಾಕಿದರು. ಸಂದೇಶ ಬಂದ ಅನಂತರ ತಾನು ಶಿಕ್ಷಣ ಸಚಿವರಿಗೆ ವರ್ಗಾವಣೆ ಮಾಡದಂತೆ ಕಟ್ಟಪ್ಪಣೆ ಹೊರಡಿಸಿದ ಸಂದರ್ಭವನ್ನು ಸ್ಮರಿಸಿಕೊಂಡರು. ಇಲ್ಲಿನ ಗೃಹಸಚಿವ ಪವರ್ ಫುಲ್ ಎಂದು ಶಹಬ್ಟಾಸ್ಗಿರಿ ಸಲ್ಲಿಸಿದರು.
Related Articles
ಶಾಲೆಯ ಪರವಾಗಿ ಗೃಹಸಚಿವ ಡಾ| ಜಿ. ಪರಮೇಶ್ವರ್ ಮತ್ತು ಶಾಲಾ ಗೃಹ ಸಚಿವ ದಿವಿತ್ ರೈ ಅವರನ್ನು ಸಮ್ಮಾನಿಸುವ ಸಂದರ್ಭದಲ್ಲಿ, ಶಾಲಾ ನಾಯಕ ಶರಣ್ “ಸಚಿದ್ವಯರು’ ಎಂದು ಉಲ್ಲೇಖೀಸಿದ್ದಕ್ಕೆ ಗೃಹಸಚಿವರು ಮೆಚ್ಚುಗೆ ಸೂಚಿಸಿದರು. ಶಾಲಾ ಪ್ರಯೋಗಾಲಯಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
Advertisement