Advertisement

ಪಿಪಿಇ ಕಿಟ್‌ ಧರಿಸಿ ರೋಗಿಗಳ ಆರೋಗ್ಯ ವಿಚಾರಿಸಿದ ಸಚಿವ

03:59 PM May 06, 2021 | Team Udayavani |

ಚಾಮರಾಜನಗರ: ಜಿಲ್ಲಾ ಆಸ್ಪತ್ರೆಗೆ ಮಿಂಚಿನ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್‌ ತಾವೇ ಸ್ವತಃ ಪಿಪಿಇಕಿಟ್‌ ಧರಿಸಿ ಕೋವಿಡ್‌ ವಾರ್ಡಿನೊಳಗೆ ಸಂಚರಿಸಿದರು.

Advertisement

ಅಲ್ಲಿ ಜಿಲ್ಲಾಡಳಿತ ಪೂರೈಸಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಸ್ಪತ್ರೆಯಲ್ಲಿ ಬುಧವಾರ 167 ಕೋವಿಡ್‌ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್‌ನಲ್ಲಿದ್ದಾರೆ. ಐಸಿಯು ವಾರ್ಡ್‌ನಲ್ಲಿ 47ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವರೇಪ್ರತಿಯೊಬ್ಬರನ್ನೂ ಖುದ್ದಾಗಿ ಭೇಟಿ ಮಾಡಿ ಬಂದುಎಷ್ಟು ದಿನ ಆಯ್ತು? ಅವತ್ತಿಗೂ ಇವತ್ತಿಗೂ ಹೇಗಿದ್ದೀರಿ?ಊಟ ಮಾಡಿದರಾ? ವೈದ್ಯರು ನಿಮ್ಮನ್ನು ಚೆನ್ನಾಗಿನೋಡ್ಕೊಳ್ತಿದಾರಾ? ಸಕಾಲಕ್ಕೆ ಆರೈಕೆದೊರೆಯುತ್ತಿದೆಯಾ? ಸಮಸ್ಯೆ ಆದ ತಕ್ಷಣ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ? ಎಂದು ಪ್ರಶ್ನಿಸಿ ಎಲ್ಲರನ್ನೂಶೀಘ್ರ ಗುಣಮುಖರಾಗಲು ಹಾರೈಸಿದರು.

ಸೋಂಕಿತ ಬಾಣಂತಿ ಮಗು ಭೇಟಿ: ಕೋವಿಡ್‌ ಪೀಡಿತಮಹಿಳೆಗೆ ಬುಧವಾರ ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು,ತಾಯಿ ಮಗುವನ್ನೂ ಸಹ ಸುರೇಶ್‌ ಕುಮಾರ್‌ ಭೇಟಿಮಾಡಿ ಕೋವಿಡ್‌ ಸಂದರ್ಭದಲ್ಲಿ ಮಗು ಜನಿಸಿದೆ. ಒಳ್ಳೆಹೆಸರಿಡಿ ಎಂದು ಹೇಳಿ ತಾಯಿಯ ಮುಖದ ಮೇಲೆ ವಿಶ್ವಾಸದ ನಗೆಯನ್ನು ತುಂಬಿದರು. ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಆಸ್ಪತ್ರೆವೈದ್ಯಕೀಯ ನಿರ್ದೇಶಕ ಡಾ. ಸಂಜೀವ್‌, ಹೆಚ್ಚುವರಿ ಎಸ್ಪಿಅನಿತಾ ಹದ್ದಣ್ಣನವರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ. ರವಿ, ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಮಹೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next