Advertisement

ಸರ್ಕಾರ ರೈತರ ಮೇಲಿನ ಪ್ರಕರಣ ವಾಪಸ್ ಪಡೆಯಲಿ: ಎಂಟಿಬಿ

06:43 PM Aug 22, 2022 | Team Udayavani |

ವಿಜಯಪುರ : ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರಿಂದ 1,777 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ಕ್ರಮವನ್ನೂ ಹಿಂದೆಯೂ ವಿರೋಧಿಸಿದ್ದೇನೆ ಮತ್ತು ಈಗಲೂ ವಿರೋಧಿಸುತ್ತೇನೆ . ಒಂದೇ ಹೋಬಳಿಯಲ್ಲಿ ಇಷ್ಟೊಂದು ದೊಡ್ಡ ಕೃಷಿ  ಭೂಮಿಯನ್ನು ವಶಪಡಿಸಿಕೊಂಡರೆ ರೈತರಿಗೆ ಪೆಟ್ಟು ಬೀಳುತ್ತದೆ ಎಂದು ಎಂ.ಟಿ.ಬಿ.ನಾಗರಾಜ್ ತಿಳಿಸಿದರು.

Advertisement

ವಿಜಯಪುರ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಸ್ವ ಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ ಅಂಥ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು . ರೈತರನ್ನು ಒಕ್ಕಲೆಬ್ಬಿಸುವಂತಹ ಕೆಲಸ ಮಾಡಬಾರದು. ಅನ್ನದಾತರ ಮೇಲೆ ಪೊಲೀಸರ ಹಲ್ಲೆ ಅಕ್ಷಮ್ಯ . 70 ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ . ಅವರ ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮ ಸರಿಯಲ್ಲ. ರೈತರ ಮೇಲೆ ಹಾಕಿರುವ ಪ್ರಕರಣಗ ಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ನೊಟೀಸ್ ಜಾರಿಗೊಳಿಸಿ ಪರಿಹಾರ ನಿಗದಿ ಮಾಡಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು . ರೈತರು ಬೆಲೆ ಹೇಳಬೇಕು . ನಂತರ ಚರ್ಚೆಗೆ ಒಳಪಡಿಸಬೇಕು . ಆದರೆ ಇದ್ಯಾವುದೂ ಆಗಿಲ್ಲ. ರೈತರು ಗಾಬರಿಯಾಗುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next