Advertisement

ಸಚಿವ ಕೃಷ್ಣಪ್ಪ, ಪ್ರಿಯಕೃಷ್ಣ, ಸೋಮಣ್ಣಗೆ ನೋಟಿಸ್‌

11:13 AM Jun 30, 2017 | Team Udayavani |

ಬೆಂಗಳೂರು: ಮಾಗಡಿ ರಸ್ತೆಯ ಪೊಲೀಸ್‌ ಕಾಲೋನಿಯ ಪಾರ್ಕ್‌ನಲ್ಲಿರುವ  ಶ್ರೀ ಸಾಯಿಬಾಬಾ ದೇವಾಲಯವನ್ನು ಮುಜರಾಯಿ ಇಲಾಖೆಯ ಅಧೀನಕ್ಕೆ ಪಡೆದುಕೊಂಡು ಆಡಳಿತಾಧಿಕಾರಿ ನೇಮಿಸಲು ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

Advertisement

ಈ ಅರ್ಜಿವಿಚಾರಣೆ ನಡೆಸಿದ ನ್ಯಾಯಾಲಯ  ಪ್ರತಿವಾದಿಗಳಾದ ವಸತಿ ಸಚಿವ  ಎಂ.ಟಿ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ ವಿ. ಸೋಮಣ್ಣ  ಅವರಿಗೆ  ನೋಟೀಸ್‌ ಜಾರಿಗೊಳಿಸಿದೆ. “ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲಾಗಿರುವ 1 ಎಕರೆ ವಿಶಾಲ ಪ್ರದೇಶದ ಉದ್ಯಾನವನದಲ್ಲಿ ಸಾಯಿಬಾಬಾ ದೇವಾಲಯ ನಿರ್ಮಿಸಲಾಗಿದೆ.

ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀ ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಾಲಯ ಟ್ರಸ್ಟ್‌, ದೇವಾಲಯಕ್ಕೆ ಬರುವ ಆದಾಯದ ಬಗ್ಗೆ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡುತ್ತಿಲ್ಲ,’ ಎಂದು ಎಸ್‌. ರವಿಚಂದ್ರ ಸಲ್ಲಿಸಿರುವ ಪಿಐಎಲ್‌ನಲ್ಲಿ ಆರೋಪಿಸಿಸಲಾಗಿದೆ. 

“ಭಕ್ತರ ದೇಣಿಗೆ ದುರ್ಬಳಕೆಯಾಗುತ್ತಿದೆ. ಈ  ಸಂಬಂಧ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವ ಎಂ.ಟಿ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ  ವಿ. ಸೋಮಣ್ಣ  ದೇವಾಲಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಮುಜರಾಯಿ ಇಲಾಖೆ ವಶಕ್ಕೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ,’ ಎಂದು ದೂರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next