Advertisement

ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳೊಂದಿಗೆ ಕಾಂತಾರ ವೀಕ್ಷಿಸಲಿರುವ ಸಚಿವ ಕೋಟ

07:32 PM Oct 25, 2022 | Team Udayavani |

ಉಡುಪಿ : ಸೂಪರ್ ಹಿಟ್ ಚಲನಚಿತ್ರ ಕಾಂತಾರ ಸಿನಿಮಾವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ವಿಭಿನ್ನವಾಗಿ ವೀಕ್ಷಿಸಲಿದ್ದಾರೆ.

Advertisement

ನಮ್ಮ ನಾಡಿನ ಸಂಸ್ಕೃತಿಯ ಜೊತೆಗೆ ದೈವಾರಾಧನೆಯ ನಂಬಿಕೆಯ ಮಹತ್ವವನ್ನು ಸಿನಿಮಾದ ಮೂಲಕ ಜಗದ್ವಿಖ್ಯಾತಿಗೊಳಿಸಿದ ನಟ,ನಿರ್ದೇಶಕ ರಿಷಬ್ ಶೆಟ್ಟಿಯವರಯವರ ಕಾಂತಾರ ಸಿನೆಮಾವನ್ನು ನಾಳೆ ದೈವ ನರ್ತಕರು ಹಾಗೂ ದರ್ಶನ ಪಾತ್ರಿಗಳೊಂದಿಗೆ ವೀಕ್ಷಿಸಲಿದ್ದೇನೆ. ಎಂದು ಟ್ವೀಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಚಿತ್ರ ಮಂದಿರದಲ್ಲಿ ನೂರಕ್ಕೂ ಅಧಿಕ ಟಿಕೆಟು ಗಳನ್ನು ಸಚಿವರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದು, ಖುದ್ದು ಸಚಿವರೇ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಕೋಟ ಅವರ ಟ್ವೀಟ್ ಗೆ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next