Advertisement

ಸಿದ್ದು ಕೋಲಾರಕ್ಕೆ ಬಂದರೆ ಸೋಲು ಖಚಿತ: ಸುಧಾಕರ್‌

09:59 PM Jul 21, 2022 | Team Udayavani |

ಕೋಲಾರ: ಸಿದ್ದರಾಮಯ್ಯ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಶ್ರೀನಿವಾಸಪುರದ ಉತ್ತರ ಕುಮಾರನಂತವರು ಇನ್ನಷ್ಟು ಮಂದಿ ಹೋಗಿ ಆಹ್ವಾನಿಸಿದರೂ ಅವರು ಕೋಲಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ವಿರೋಧಿಸಿದವರಲ್ಲಿ ಈ ಉತ್ತರ ಕುಮಾರನೂ ಒಬ್ಬ. 2023ರಲ್ಲಿ ಅವರನ್ನು ಸೋಲಿಸಲು ಕೋಲಾರದಲ್ಲಿ ಖೆಡ್ಡಾ ತೋಡಿದ್ದಾರೆಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌  ಅವರು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ  ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ರಾಜ್ಯ  ಸರಕಾರದ ಸಾಧನಾ ಸಮಾವೇಶ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಕೋಲಾರದಲ್ಲಿ 2023ರಲ್ಲಿ ಮಾಲೂರು ಮಂಜುನಾಥ್‌ ಗೌಡ ಗೆಲ್ಲುವುದು ಖಚಿತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next