Advertisement

ಕಲಾವಿದರ ನೆರವಿಗಾಗಿ ಸಹಾಯವಾಣಿ

10:44 AM Aug 19, 2018 | Team Udayavani |

ಬೆಂಗಳೂರು: ಮಾಸಾಶನ ಸಹಿತ ಕಲಾವಿದರ‌  ಅನುಕೂಲಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕನ್ನಡ ಭವನದಲ್ಲಿ “ಉಚಿತ ಸಹಾಯವಾಣಿ ಕೇಂದ್ರ’ವನ್ನು ಸ್ಥಾಪಿಸಿದ್ದು,  ಶನಿವಾರ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಚಾಲನೆ ನೀಡಿದರು.

Advertisement

ದೂರದ ಪ್ರದೇಶಗಳಿಂದ ಮಾಸಾಶನ ಸಹಿತ  ಹಲವು ಉದ್ದೇಶಗಳಿಗಾಗಿ ಕಲಾವಿದರು ಕನ್ನಡ ಭವನಕ್ಕೆ ಭೇಟಿ ನೀಡುತ್ತಾರೆ.ಆದರೆ ಇವರಲ್ಲಿ ಹಲವರಿಗೆ  ತಮಗೆ ಸಿಗುವ ಸವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಇಲಾಖೆಯ ಯಾವ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂಬ ಬಗ್ಗೆ ತಿಳಿವಳಿಕೆ ಇರುವುದಿಲ್ಲ.ಇಂತಹ ಕಲಾವಿದರುಗಳಿಗೆ ಸಹಾಯವಾಣಿ ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿಂದ ಬರುವ ಕಲಾವಿದರುಗಳಿಗೆ ಮಾಸಾಶನ ಸಹಿತ ಇನ್ನಿತರ ಸವಲತ್ತುಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಅಂಥವರಿಗೆ ಸಹಾಯವಾಣಿ ಕೇಂದ್ರ ನೆರವಾಗಲಿದೆ. ಕಲಾವಿದರ ಅನುಕೂಲಕ್ಕಾಗಿಯೇ ಇದನ್ನು ತೆರೆಯಲಾಗಿದ್ದು, ಕಚೇರಿಯ ಸಮಯದಲ್ಲಿ ಮಾತ್ರ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಪಾರ ದರ್ಶಕ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುದು ಎಂದು ತಿಳಿಸಿದರು.

ಗ್ರಂಥಾಲಯ ಇಲಾಖೆಗೆ ಪುಸ್ತಕ ಹಸ್ತಾಂತರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಹಲವು ಪುಸ್ತಕಗಳು ಸಹಿತ 1ಲಕ್ಷದ 5 ಸಾವಿರ ಪುಸ್ತಕಗಳನ್ನು  ಸಚಿವೆ ಜಯಮಾಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ|ಸತೀಶ್‌ ಕುಮಾರ ಎಸ್‌.ಹೊಸಮನಿ ಅವರಿಗೆ ಹಸ್ತಾಂತರಿಸಿದರು. ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ವರ್ಷಗಳಷ್ಟು ಹಳೆಯದಾದ ವಿವಿಧ ಲೇಖಕರ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಯ ಪ್ರಾಧಿಕಾರಗಳಲ್ಲಿರುವ ಎಲ್ಲಾ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ನೀಡುವ ಭರವಸೆಯನ್ನು ಸಚಿವೆ ಜಯಾಮಾಲಾ ನೀಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next