Advertisement

ಕಾಶ್ಮೀರವನ್ನು ಕೋಮು ದೃಷ್ಟಿಯಿಂದ ನೋಡುವುದು ಸಲ್ಲ: ಸಚಿವ ಜೈಶಂಕರ್

09:08 AM Sep 28, 2019 | Team Udayavani |

ನ್ಯೂಯಾರ್ಕ್: ಭಾರತ ಗಲ್ಫ್ ನ ಇಸ್ಲಾಂ ದೇಶಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದೆ. ಭಾರತದ ಪ್ರಮುಖ ಇಸ್ಲಾಮಿಕ್ ಸಂಘಟನೆಯಾದ ಜಮೈತ್ ಉಲೆಮಾ ಇ ಹಿಂದ್ ಜಮ್ಮು ಕಾಶ್ಮೀರದಲ್ಲಿ ಬದಲಾವಣೆ ತರಲು ಬಯಸುತ್ತಿದೆ. ಹಾಗಾಗಿ ಭಾರತ ಮುಸ್ಲಿಂ ವಿರೋಧಿ ಎಂಬ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ . ಕಾಶ್ಮೀರ ಸಮಸ್ಯೆಯನ್ನು ಕೋಮು ದೃಷ್ಟಿಯಿಂದ ನೋಡುವುದು ತಪ್ಪು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

Advertisement

ಸಾರ್ಕ್ ದೇಶಗಳ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತ್ಯಾತೀತತೆ ಎನ್ನುವುದನ್ನು ಕಾನೂನಿನ ಮೂಲಕ ಪ್ರಚಾರಪಡಿಸಿಲ್ಲ. ಅದು ಸಮಾಜದ ನೀತಿಗಳ ಮೂಲಕ ಮುನ್ನಲೆಗೆ ಬಂದಿರುವಂತದ್ದು. ಭಾರತದ ನಿತಿಗಳು ಮತ್ತು ಹಿಂದೂ ನೀತಿಗಳು ಜಾತ್ಯಾತೀತವಾಗಿದೆ. ಹೀಗಾಗಿ ಭಾರತದಲ್ಲಿ ಜಾತ್ಯಾತೀತತೆ ತತ್ವಗಳಿಗೆ ಅಪಾಯವಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next