Advertisement

ಕೋವಿಡ್‌ ನಿಧಿಗೆ ವೇತನ ನೀಡಿದ ಸಚಿವ

05:51 AM May 23, 2020 | Suhan S |

ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಾವು ಈ ಹಿಂದೆ ತಿಳಿಸಿದಂತೆ ತಮ್ಮ 3 ತಿಂಗಳ ವೇತನವನ್ನು ಕೋವಿಡ್‌-19 ಪರಿಹಾರ ನಿಧಿಗೆ ನೀಡಿದ್ದಾರೆ.

Advertisement

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವರಿಗೆ ಭೇಟಿ ಮಾಡಿ, ತಮ್ಮ ವೇತನದ 4,22,730 ರೂ.ಚೆಕ್‌ ಸಲ್ಲಿಸಿದರು. ಇದೇ ವೇಳೆ ಸಚಿವರು, ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಎಲ್ಲ ಸಿಬ್ಬಂದಿ ಒಂದು ದಿನದ ಸಂಬಳದ 23,46,340 ರೂ. ಚೆಕ್‌ ಕೂಡ ಸಿಎಂ ಪರಿಹಾರ ನಿಧಿಗೆ ನೀಡಿದರು.

ಸಿಬ್ಬಂದಿಗೆ ಅಭಿನಂದನೆ: ಕೋವಿಡ್‌ -19 ಹಿನ್ನೆಲೆಯಲ್ಲಿ ಜನತೆಗೆ ಸಹಾಯವಾಗಲೆಂದು ಒಂದು ದಿನದ ಸಂಬಳ ನೀಡಿದ ಬೀದರ್‌ ಪಶು ವೈದ್ಯಕೀಯ ವಿವಿಯ ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ: ಕೋವಿಡ್‌-19 ಸಂಕಷ್ಟದಿಂದ ಭಾರತ ನಲುಗಿ ಹೋಗಿದೆ. ದೇಶ ಹಾಗೂ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆರ್ಥಿಕವಾಗಿಯೂ ಲಾಕ್‌ ಡೌನ್‌ನಿಂದ ಹೊಡೆತ ಬಿದ್ದಿದೆ. ನನ್ನ ಮತಕ್ಷೇತ್ರದಲ್ಲಿ ಕಷ್ಟದಲ್ಲಿದ್ದವರಿಗೆ ತಾವು ಕೂಡ ಜನರಿಗೆ ಆಹಾರದ ವ್ಯವಸ್ಥೆ ಮಾಡಿ ಸಹಾಯ ಮಾಡಿದ್ದಾಗಿ ಸಚಿವ ಚವ್ಹಾಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next