Advertisement

ಹೊಸಕೋಟೆ ಗ್ರಾಮದಲ್ಲಿ ಸಚಿವ ನಿರಾಣಿ ರೋಡ್‌ ಶೋ

09:21 AM May 03, 2023 | Team Udayavani |

ಕೆರೂರ: ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಬಿಜೆಪಿ ಧುರೀಣ ಹನಮಂತಗೌಡ ಪಾಟೀಲ ನೇತೃತ್ವದಲ್ಲಿ ಸಚಿವ ಡಾ| ಮುರುಗೇಶ ನಿರಾಣಿ ರೋಡ್‌ ಶೋ ಮೂಲಕ ಮತಯಾಚನೆ ಮಾಡಿದರು.

Advertisement

ಸಚಿವ ನಿರಾಣಿ ಗ್ರಾಮಕ್ಕೆ ಬರುತ್ತಿದ್ದಂತೆ ಸುಮಂಗಲೆಯರು ಆರತಿಎತ್ತಿ,ಯುವಕರು ಘೋಷಣೆ ಕೂಗುತ್ತಾ,ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಂಡರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರೋಡ ಶೋ ಹನಮಂತಗೌಡ ಪಾಟೀಲರ ಮನೆ ಹತ್ತಿರ ಸಭೆಯಾಗಿ ಮಾರ್ಪಟ್ಟಿತು.

ಡಾ| ಮುರುಗೇಶ ನಿರಾಣಿ ಮಾತನಾಡಿ, ಯೋಜನೆಗಳನ್ನು ವಿವರಿಸಿ ಅವುಗಳ ಅನುಷ್ಠಾನಕ್ಕಾಗಿ ಬಿಜೆಪಿ ಗೆಲ್ಲಿಸಿ ಎಂದರು.

ಹನಮಂತಗೌಡ ಪಾಟೀಲ, ಪ್ರಕಾಶ ನಾಯ್ಕ ಮಾತನಾಡಿದರು.ವೆಂಕಣ್ಣ ಯರಗಟ್ಟಿ, ಅಶೋಕ ನಾಯ್ಕ, ಮಲ್ಲಿಕಾರ್ಜುನ ಅಂಗಡಿ,ಪೀರಸಾಬ ಹಾಜಿಖಾನ, ತುಳಸಪ್ಪ ನಾಯ್ಕ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next