Advertisement

ಮಳೆಗಾಗಿ ಋಷ್ಯಶೃಂಗನಿಗೆ ಡಿಕೆಶಿ ಪರ್ಜನ್ಯ ಪೂಜೆ; ಪರಮೇಶ್ವರ್‌ ನಾಯ್ಕ್‌ ಸಾಥ್‌

09:58 AM Jun 07, 2019 | Team Udayavani |

ಚಿಕ್ಕಮಗಳೂರು: ಮಳೆಗಾಗಿ ಪ್ರಾರ್ಥಿಸಿ ಸರ್ಕಾರದ ವತಿಯಿಂದ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಪಿ.ಟಿ.ಪರಮೇಶ್ವರ್‌ ನಾಯ್‌ಕ್‌ ಅವರು ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗುರುವಾರ ವಿಶೇಷ ಪರ್ಜನ್ಯ ಪೂಜೆ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರತಿ ವರ್ಷದ ಪ್ರತೀತಿಯಂತೆ ಚಿಕ್ಕಮಗಳೂರಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಪರ್ಜನ್ಯ ಪೂಜೆ ಸಲ್ಲಿಸಿದೆನು ಎಂದು ಸಚಿವಡಿ.ಕೆ.ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಸುಮಾರು 2 ಗಂಟೆಗೂ ಕಾಲ ನಡೆದ ವಿಶೇಷ ಪೂಜೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಪರಮೇಶ್ವರ್‌ ನಾಯ್ಕ್‌ ಅವರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

Advertisement

ರಾಜ್ಯದ ಹಲವು ಭಾಗಗಳಲ್ಲಿ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು, ಜನ , ಜಾನುವಾರುಗಳು ನೀರು ಸಿಗದೆ ಪರದಾಡುತ್ತಿವೆ,ಇನ್ನೊಂದೆಡೆ ಕೆಲವೆಡೆ ಕಳೆದೆರಡು ದಿನಗಳಿಂದ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ.

ಜೂನ್‌ 8 ರಂದು ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next