Advertisement

‘ಸ್ವಚ್ಛ ಭಾರತ’ಮರೆತ ಸಚಿವ!

03:15 AM Jun 30, 2017 | Team Udayavani |

ಪಟ್ನಾ: ‘ಸ್ವಚ್ಛ ಭಾರತ’ ಕೇಂದ್ರ ಸರಕಾರದ ಅಭಿಯಾನ. ಆದರೆ, ಕೇಂದ್ರ ಸಚಿವರೇ ಇದನ್ನು ಮರೆತು ಸಾರ್ವಜನಿಕ ವಾಗಿಯೇ ಮೂತ್ರ ಮಾಡಿದರೆ..? ಇಂಥದ್ದೊಂದು ಅನಪೇಕ್ಷಿತ ನಡವಳಿಕೆ ಪ್ರದರ್ಶಿಸಿ, ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಸರ್ವತ್ರ ಟೀಕೆಗೆ ಗುರಿಯಾಗಿದ್ದಾರೆ. ರಾಧಾ ಮೋಹನ್‌ ಸಿಂಗ್‌ ಅವರು ಕಾರು ನಿಲ್ಲಿಸಿ, ಗೋಡೆಯೊಂದರ ಮೇಲೆ ಉಚ್ಚೆ ಹೊಯ್ಯುತ್ತಿರುವ, ಬದಿಯಲ್ಲೇ ಅವರ ಭದ್ರತಾ ಸಿಬ್ಬಂದಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

Advertisement

ಸಚಿವರು ಇತ್ತೀಚೆಗೆ ತಮ್ಮ ಲೋಕಸಭಾ ಕ್ಷೇತ್ರ, ಬಿಹಾರದ ಪೂರ್ವ ಚಂಪಾರಣ್‌ನ ಮೋತಿಹಾರ್‌ಗೆ ಭೇಟಿ ನೀಡಿದ್ದು, ವೇಳೆ ಸಾರ್ವಜನಿಕವಾಗಿ ದೇಹಬಾಧೆ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್‌ ಆಗಿ ಟೀಕೆಗಳು ಕೇಳಿಬರುತ್ತಿದ್ದಂತೆ ಸಚಿವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹತ್ತಿರದಲ್ಲಿ ಶೌಚಾಲಯ ಇರಲಿಲ್ಲ. ಪರಿಣಾಮ ಹೀಗೆ ಮಾಡಬೇಕಾಯಿತು ಎಂದಿದ್ದಾರೆ. ಅಲ್ಲದೇ ಈ ಚಿತ್ರ ಒಂದು ವರ್ಷ ಅಥವಾ ಆರು ತಿಂಗಳು ಹಳತು ಎಂದೂ ಹೇಳಿದ್ದಾರೆ. ಸಚಿವರ ಈ ಫೋಟೋವನ್ನು ಆರ್‌ಜೆಡಿ ಟ್ವೀಟರ್‌ನಲ್ಲಿ ಪ್ರಕಟಿಸಿದ್ದು, ಲೇವಡಿ ಮಾಡಿದೆ.

‘ಸರಕಾರ ನಮ್ಮಿಂದ ಸ್ವಚ್ಛ ಭಾರತ ಸೆಸ್‌ ಪಡೆಯುತ್ತಿದ್ದರೆ, ಕೇಂದ್ರದ ಸಚಿವರೇ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದು ಸರಿಯೇ,’ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next