Advertisement

ಥರ್ಡ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ: 3ನೇ ಕೋವಿಡ್ ವರದಿ ನಿರೀಕ್ಷೆಯಲ್ಲಿ ಸಿಟಿ ರವಿ

02:42 PM Jul 12, 2020 | keerthan |

ಚಿಕ್ಕಮಗಳೂರು: ಸಚಿವ ಸಿಟಿ ರವಿ ಅವರು ಕೋವಿಡ್ ಭೀತಿ ಎದುರಿಸುತ್ತಿದ್ದು, ಇಂದು ಮತ್ತೊಮ್ಮೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ಹಿಂದೆ ನಡೆಸಿದ ಪರೀಕ್ಷೆಯಲ್ಲಿ ಒಮ್ಮೆ ನೆಗೆಟಿವ್ ಮತ್ತು ಒಮ್ಮೆ ಪಾಸಿಟಿವ್ ವರದಿ ಬಂದಿರುವ ಕಾರಣ ಸಚಿವರು ಇಂದು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶವನ್ನು ಎದುರು ನೋಡಿತ್ತಿದ್ದಾರೆ.

Advertisement

ಶನಿವಾರ ವೈದ್ಯಕೀಯ ಸಚಿವ ಕೆ ಸುಧಾಕರ್ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ, ಸಚಿವ ಸಿ ಟಿ ರವಿ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎಂದಿದ್ದರು. ನಂತರ ಈ ಬಗ್ಗೆ ಟ್ವೀಟ್ ಮಾಡಿದ್ದ ಸಿ ಟಿ ರವಿ ಅವರು, ನನಗೆ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯವಾಗಿದ್ದೇನೆ ಎಂದಿದ್ದರು.

ಹೀಗಾಗಿ ಇಂದು ಮಂದೆ ಸಚಿವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಸದ್ಯ ತಮ್ಮ ತೋಟದ ಮನೆಯಲ್ಲಿರುವ ಸಚಿವರು, ಹೋಂ ಕ್ವಾರಂಟೈನ್ ಆಗಿದ್ದಾರೆ. ಇಂದು ಟ್ವೀಟ್ ಮಾಡಿರುವ ಅವರು, ಒಂದು ವಾರದೊಳಗಿನ ಎರಡು ಟೆಸ್ಟ್ ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ. ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next